Karnataka Times
Trending Stories, Viral News, Gossips & Everything in Kannada

Varthur Santosh: ಜಗ್ಗೇಶ್ ನೀಡಿದ್ದ ‘ಕಿತ್ತೋದ್ ನನ್ನ ಮಗ’ ಹೇಳಿಕೆ ಬಗ್ಗೆ ವರ್ತೂರ್ ಕೊಟ್ಟ ರಿಯಾಕ್ಷನ್ ಹೀಗಿತ್ತು!

advertisement

ಈ ಭಾರಿಯ ಬಿಗ್‌ಬಾಸ್‌ ಸೀಸನ್ 10 ಬಹಳಷ್ಟು ಉಹಾಪೋಹಗಳನ್ನು ಉಂಟು ಮಾಡಿತ್ತು. ಅದೇ ರೀತಿ ಕೆಲವೊಂದು ಕಂಟೆಸ್ಟ್ ಗಳ ವೈಯಕ್ತಿಕ ವಿಚಾರ ಕೂಡ ಸುದ್ದಿಯಲ್ಲಿತ್ತು. ಅದರಲ್ಲಿ ನಾಲ್ಕನೇ ರನ್ನರ್‌ ಅಪ್ ಆಗಿರೋ ವರ್ತೂರ್ ಸಂತೋಷ್‌ ಕೂಡ ಒಬ್ಬರಾಗಿದ್ದರು. ಬಿಗ್‌ಬಾಸ್ ಮನೆಯಿಂದ ಹಿಂತಿರುಗುತ್ತಿದ್ದಂತೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ವರ್ತೂರ್ ಗಿಟ್ಟಿಸಿಕೊಂಡಿದ್ದಾರೆ. ವರ್ತೂರು ಸಂತೋಷ್ (Varthur Santosh)  ಮುಗ್ಧತೆ, ಒಳ್ಳೆಯತನಕ್ಕೆ ಅಭಿಮಾನಿಗಳು ಬೆಂಬಲ ನೀಡಿದ್ದರು.

ಹುಲಿ ಉಗುರು ಪ್ರಕರಣ

ವರ್ತೂರ್ ಸಂತೋಷ್ (Varthur Santosh) ಅವರನ್ನು ಹುಲಿ ಉಗುರು ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲೇ ಅರೆಸ್ಟ್ ಮಾಡಿದ ಪ್ರಕರಣ ದೊಡ್ಡ ಸುದ್ದಿ ಆಗಿತ್ತು. ಬಿಗ್ ಬಾಸ್ ಮನೆಯಿಂದಲೇ ವರ್ತೂರ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಮತ್ತೆ ಬಿಗ್ ಮನೆಗೆ ವಾಪಸ್ಸು ಎಂಟ್ರಿ ನೀಡಿದ್ದರು. ಬಳಿಕ ಸ್ಯಾಂಡಲ್​ವುಡ್​ ನಾಯಕರು ಸೆಲೆಬ್ರೆಟಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಹಳಷ್ಟು ಜನರಿಗೆ ಹುಲಿ ಉಗುರು ವಿಚಾರವಾಗಿ ನೋಟಿಸ್ ಕೂಡ ನೀಡಿದ್ರು.

advertisement

ನಟ ಜಗ್ಗೇಶ್ ಹೇಳಿಕೆ ವೈರಲ್

ಈ ಬಗ್ಗೆ ನಟ ಜಗ್ಗೇಶ್​ ಅವರಿಗೂ ಕೂಡ ನೋಟಿಸ್ ನೀಡಲಾಗಿತ್ತು. ಇತ್ತೀಚಿಗಷ್ಟೇ ಕಾರ್ಯಕ್ರಮ ಒಂದರಲ್ಲಿ ಪ್ರತಿಕ್ರಿಯಿಸಿದ ಜಗ್ಗೇಶ್ (Jaggesh)​ ವರ್ತೂರ್ ಅವರಿಗೆ ಕಿತ್ತೋದ್​ ನನ್ನ ಮಗ ತಗಲಾಕ್ಕೊಂಡ ಎಂದಿದ್ದರು. ಈ ಬಗ್ಗೆ ವರ್ತೂರ್ ಅಭಿಮಾನಿಗಳು ಅಕ್ರೋಶ ವ್ಯಕ್ತ ಪಡಿಸಿದ್ದರು. ಹಿರಿಯ ನಟರಾಗಿರುವ ಜಗ್ಗೇಶ್ ಆವರು ವರ್ತೂರು ಸಂತೋಷ್​ (Varthur Santosh)ಗೆ ಆ ರೀತಿಯ ಮಾತುಗಳನ್ನು ಹೇಳಿದ್ದು ತಪ್ಪು, ಕಿತ್ತೋದ್ ನನ್ನ ಮಗ ಎಂಬ ಪದ ಬಳಸಬಾರದಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಬಗ್ಗೆ ವರ್ತೂರು ಸಂತೋಷ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ

ವರ್ತೂರ್ (Varthur Santosh) ಹೇಳಿದ್ದೇನು?

ಬಿಗ್ ಬಾಸ್ ನಲ್ಲಿ ಸುದೀಪಣ್ಣ ಒಂದು ಮಾತು ಹೇಳಿದ್ದರು, ಕೆಲವೊಂದು ಜಾಗದಲ್ಲಿ ಮಾತನಾಡಬೇಕು. ಕೆಲವೊಮ್ಮೆ ಮಾತನಾಡದೇ ಸುಮ್ಮನಿರಬೇಕು. ಆ ಸೈಲೆಂಟ್ ಗೆ ಕೆಲವೊಮ್ಮೆ ಕಾಲ ಉತ್ತರ ಕೊಡುತ್ತೆ. ತೂಕದ ಜತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು ಎಂದು ಆವರು ಹೇಳಿದ್ದಾರೆ.ಕಾಲಾಯ ತಸ್ಮೈ ನಮಃ ಅಷ್ಟೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

advertisement

Leave A Reply

Your email address will not be published.