Varthur Santosh: ಬಿಗ್ ಬಾಸ್ ನ ನಾಲ್ಕನೆ ರನ್ನರ್ ಆಪ್ ವರ್ತೂರು ಸಂತೋಷ್ ಗೆ ಸಿಕ್ಕ ಹಣವೆಷ್ಟು?
ಈ ಬಾರಿಯ ಬಿಗ್ ಬಾಸ್ (Bigg Boss) ಸೀಸನ್ ಬಹಳಷ್ಟು ಹವಾ ಕ್ರಿಯೇಟ್ ಮಾಡಿತ್ತು.ಧನಾತ್ಮಾಕ ವಾಗಿ ಹೆಚ್ಚು ಸುದ್ದಿ ಮಾಡಿಲ್ಲ ವಾದರೂ ಋಣತ್ಮಾಕ ವಾಗಿ ಹೆಚ್ಚು ಸುದ್ದಿ ಮಾಡಿತ್ತು. ಆದ್ರೆ ಈ ಸೀಸನ್ ಟಿ ಅರ್ ಪಿಯು ಹೆಚ್ಚು ಗಿಟ್ಟಿಸಿಕೊಂಡಿದೆ. ಇನ್ನು ನಿನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ಜರುಗಿದ್ದು ಸೀಸನ್ 10ರ ಕಾರ್ಯಕ್ರಮದಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿ ಮರೆದಿದ್ದಾರೆ.
ವರ್ತೂರ್ ನಾಲ್ಕನೆ ರನ್ನರ್ ಆಪ್
ಬಿಗ್ ಬಾಸ್ ಮನೆಯ ಕುಚಿಕು ದೋಸ್ತಿಗಳಂತೆ ಇದ್ದ ವರ್ತೂರು ಸಂತೋಷ್ (Varthur Santosh) ಹಾಗೂ ತುಕಾಲಿ ಸಂತೋಷ್ 5ನೇ ಹಾಗೂ 4ನೇ ರನ್ನರ್ಅಪ್ ಆಗಿದ್ದಾರೆ.ಅದರಲ್ಲೂ ವರ್ತೂರು ಅವರು ಜನತೆಯ ಹೃದಯ ಗೆದಿದ್ದಾರೆ.ವರ್ತೂರು ಅವರು ಹಳ್ಳಿಕಾರ್ ಹಸುಗಳ ಮೂಲಕ ಬಹಳಷ್ಟು ಖ್ಯಾತಿ ಪಡೆದಿದ್ದು ಅಲ್ಲಿನ ಜನತೆ ಬಹಳಷ್ಟು ಸಪೊರ್ಟ್ ಮಾಡುತ್ತಿದ್ದರು. ಅದೇ ರೀತಿ ಬಿಗ್ ಬಾಸ್ ನಿಂದ ಬಂದ ಹಣದಲ್ಲಿ ಹಳ್ಳಿಕಾರ್ ತಳಿಗೆ ಇನ್ವೆಸ್ಟ್ ಮಾಡ್ತೀನಿ ಎಂದು ಸಹ ಹೇಳಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೆಲವೇ ಸಮಯದಲ್ಲಿ ಹುಲಿ ಹುಗುರು ವಿಚರಾದಲ್ಲಿ ಭಾರೀ ವಿವಾದ ಹಿನ್ನೆಲೆ ವರ್ತೂರು ಸಂತೋಷ್ ಜೈಲು ಸೇರಿದ್ರು. ನಂತರ ಬಿಗ್ ಬಾಸ್ ಮನೆ ಸೇರಿ ಫೈನಲ್ ಸ್ಪರ್ಧಿಗಳಲ್ಲಿ ಕೂಡ ಬಬ್ಬರಾಗಿದ್ದಾರೆ.ಇನ್ನು, ವರ್ತೂರ್ ಸಂತೋಷ್ ದೊಡ್ಮನೆಯಲ್ಲಿ 112 ದಿನಗಳನ್ನು ಕಳೆದಿದ್ದು ಖುಷಿ ಇದೆ ಎಂದಿದ್ದಾರೆ.
ಪಡೆದ ಹಣವೆಷ್ಟು?
ನಾಲ್ಕನೆ ಸದಸ್ಯನಾಗಿ ವರ್ತೂರು ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇವರ ಆಟ ಟಾಸ್ಕ್ ಕಡಿಮೆ ಇದ್ದರೂ ಜನರ ಬೆಂಬಲ ಇವರಿಗೆ ಬಹಳಷ್ಟು ಇತ್ತು. ಈ ಮೂಲಕ ವರ್ತೂರು ಸಂತೋಷ್ ಅವರಿಗೆ ಎರಡು ಲಕ್ಷ ಹಣ ಸಿಕ್ಕಿದೆ. ಇಂತಹ ಕಾರ್ಯಕ್ರಮದಲ್ಲಿ ಫೈನಲ್ವರೆಗೂ ಬಂದು ಈ ಸ್ಟೇಜ್ನಲ್ಲಿ ಇಲ್ಲಿವರೆಗೂ ಬಂದಿರೋದು ನನಗೆ ಹೆಮ್ಮೆಇದೆ ಎಂದಿದ್ದಾರೆ. ಹಳ್ಳಿಕಾರ್ ತಳಿಗಳ ಬಗ್ಗೆ ಸಮಾವೇಶ ನಡೆಸುವುದಾಗಿಯೂ ಅದಕ್ಕೆ ಕಿಚ್ಚ ಸುದೀಪ್ ಅವರು ಅತಿಥಿ ಆಗಿ ಬರಬೇಕು ಎಂದು ಸಹ ಕೇಳಿದ್ದಾರೆ.
ಕಾರ್ತಿಕ್ ವಿನ್ನರ್
ಈ ಸೀಸನ್ ನಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಕಾರ್ತಿಕ್ (Kartik Mahesh) ವಿನ್ನರ್ ಎನಿಸಿಕೊಂಡರೆ, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ವಿನಯ್ಗೆ ಎದುರಾಗಿ ನಿಂತು ಸಾಕಷ್ಟು ಟಾಸ್ಟ್ಗಳಲ್ಲಿ ಕಾರ್ತಿಕ್ ಚಮಕ್ ಕೊಟ್ಟಿದ್ದರು. ಡ್ಯಾನ್ಸ್, ಮನರಂಜನೆ ಎಲ್ಲದರಲ್ಲೂ ಕಾರ್ತಿಕ್ ಮಹೇಶ್ ಹೈಲೆಟ್ ಆಗಿದ್ದು ಸ್ನೇಹ ವಿಚಾರ ವಾಗಿ ಸಖತ್ ಹೈಲಟ್ ಆಗಿದ್ದರು.