Kiccha Sudeep: ದರ್ಶನ್ ಜೊತೆ ಯಾವಾಗ ಒಂದಾಗ್ತೀರಾ ಎಂದು ಅಭಿಮಾನಿ ಕೇಳಿದ್ದಕ್ಕೆ ಕಿಚ್ಚನ ಕೊಟ್ಟ ಉತ್ತರ ಹೀಗಿತ್ತು!
ದರ್ಶನ್ ಮತ್ತು ಸುದೀಪ್ (Kiccha Sudeep) ಒಂದು ಕಾಲದಲ್ಲಿ ಆಪ್ತ ಗೆಳೆಯರಾಗಿದ್ದು ಬಳಿಕ ಸ್ಟಾರ್ ವಾರ್ ಮಾಡಿಕೊಂಡವರಲ್ಲಿ ಮುಂಚುಣಿಯಲ್ಲಿದ್ದಾರೆ. ದರ್ಶನ್ (Darshan) ಮತ್ತು ಕಿಚ್ಚನ ನಡುವೆ ನಡೆಯುವ ಶೀತಲ ಸಮರ ಹೊಸದಾದ ವಿಚಾರವೇನಲ್ಲ. ಇದೀಗ ಮತ್ತೆ ದರ್ಶನ್ ಮತ್ತು ಸುದೀಪ್ (Kiccha Sudeep) ನಡುವಿನ ಮುಸುಕಿನ ಗುದ್ದಾಟಕ್ಕೆ ಹೊಸ ವಿಚಾರವೊಂದು ಸೇರ್ಪಡೆಯಾಗುತ್ತಿದೆ. ಬಿಗ್ ಬಾಸ್ ಈ ಸಲದ ಸಂಚಿಕೆ ಮುಗಿದಿದ್ದು ಬಳಿಕ ಕಿಚ್ಚ ಸುದೀಪ್ ಅವರು ಒಂದು ಟ್ವೀಟ್ ಮಾಡಿದ್ದು ಸದ್ಯ ಈ ವಿಚಾರ ಎಲ್ಲೆಡೆ ಚರ್ಚೆ ಆಗುತ್ತಿದೆ.
ವೈಮನಸ್ಸು ಉಂಟಾಗಿತ್ತು;
ಕನ್ನಡ ಸಿನೆಮಾ ರಂಗದಲ್ಲಿ ನಟ ಅಂಬರೀಶ್ (Ambareesh) ಮತ್ತು ವಿಷ್ಣುವರ್ಧನ್ (Vishnuvardhan) ಅವರು ಪ್ರಾಣ ಸ್ನೇಹಿತರು ಎಂಬುದು ನಮಗೆಲ್ಲ ತಿಳಿದೇ ಇದೆ. ಆ ಬಳಿಕ ಆ ಇಬ್ಬರ ಸ್ಥಾನಕ್ಕೆ ದರ್ಶನ್ ಮತ್ತು ಸುದೀಪ್ ಹೇಳಿ ಮಾಡಿಸಿದಂತಿದ್ದರೂ ಆದರೆ ಅವರಿಬ್ಬರ ನಡುವೆ ಅನೇಕ ವಿಚಾರಕ್ಕೆ ವೈ ಮನಸ್ಸು ಬಂದ ಹಿನ್ನೆಲೆ ದೂರಾ ದೂರ ಉಳಿದಿದ್ದಾರೆ. ಇದಾದ ಬಳಿಕ ಒಬ್ಬರ ವಿರುದ್ಧ ಇನ್ನೊಬ್ಬರು ಪರೋಕ್ಷ ಹೇಳಿಕೆ ನೀಡುತ್ತಲೇ ಇದ್ದರು. ಬಳಿಕ ಇತ್ತೀಚೆಗಷ್ಟೇ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಎಲ್ಲ ಅಭಿಮಾನಿಗಳಿಗೆ ಶಾಕ್ ಕೂಡ ಆಗಿತ್ತು. ಬಳಿಕ ಕಿಚ್ಚ ಸುದೀಪ್ (Kiccha Sudeep) ಅವರು ಈ ಬಗ್ಗೆ ಖುಷಿಯನ್ನು ಸಹ ವ್ಯಕ್ತಪಡಿಸಿದ್ದರು.
ದರ್ಶನ್ ಬಗ್ಗೆ ಪ್ರಶ್ನೆ:
ಕಿಚ್ಚ ಸುದೀಪ್ (Kiccha Sudeep) ಬಿಗ್ ಬಾಸ್ ಶೋ ನಲ್ಲಿ ಬ್ಯೂಸಿ ಆಗಿದ್ದಂತೆ ಡಿ ಬಾಸ್ ಕಾಟೇರ ಸಿನೆಮಾ ಶೂಟಿಂಗ್ , ರಿಲೀಸ್ ಎಂದು ಬ್ಯೂಸಿ ಇದ್ದರು. ಬಿಗ್ ಬಾಸ್ (Bigg Boss)ಸೀಸನ್ ಮುಗಿದ ಕಾರಣ ಟ್ವಿಟ್ಟರ್ ಎಕ್ಸ್ ನಲ್ಲಿ ಆಸ್ಕ್ ಕಿಚ್ಚ (Ask Kiccha) ಎಂದು ಬರೆದುಕೊಂಡಿದ್ದರು. ಆಗ ಕಿಚ್ಚ ಸುದೀಪ್ ಅವರಿಗೆ ದರ್ಶನ್ ಬಗ್ಗೆ ಕೆಲ ಪ್ರಶ್ನೆ ಮಾಡಿ ಕೇಳಿದ್ದಾರೆ. ಇದಕ್ಕೆ ಕಿಚ್ಚ ಕೋಪಿಸಿಕೊಳ್ಳದೇ ಕೂಲ್ ಆಗೇ ಉತ್ತರ ನೀಡಿದ್ದಾರೆ.
ಅಭಿಮಾನಿಯೊಬ್ಬರು, ದರ್ಶನ್ ಬಗ್ಗೆ ಒಂದು ಪ್ರತಿಕ್ರಿಯೆ ನೀಡುವುದಾದರೆ ಅದೇನು ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿದ್ದ ಅವರು, ಅವರಿಗೆ ಒಳ್ಳೆದಾಗಲಿ ಎಂದು ಉತ್ತರಿಸಿದ್ದಾರೆ. ಬಳಿಕ ಇನ್ನೊಬ್ಬ ಅಭಿಮಾನಿಯೊಬ್ಬರು ನಿಮ್ಮ ಹಾಗೂ ದರ್ಶನ್ ಸರ್ ನಡುವಿನ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ಳುವಿರಿ? ಅದಕ್ಕೆ ಎಷ್ಟು ಸಮಯವಾಗಬಹುದು ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಮಸ್ಯೆ ಏನು ಎಂಬ ಹುಡುಕಾಟದಲ್ಲಿ ನಾವಿದ್ದೇವೆ, ಎಂದು ನಗುವ ಒಂದು ಇಮೋಜಿ ಹಾಕಿ ಕೂಲ್ ಆಗಿ ಉತ್ತರಿಸಿದ್ದಾರೆ. ಈ ಉತ್ತರ ಕಂಡು ಅಭಿಮಾನಿಗಳು ಶಾಖ್ ಆಗಿ ಕಿಚ್ಚನ ತಾಳ್ಮೆ ಉತ್ತರಕ್ಕೆ ಪ್ರಶಂಸೆ ನೀಡಿದ್ದಾರೆ.
Samasye yenu antha ibru hudukthaa idheevi.
😁 https://t.co/KCyDd8gLad— Kichcha Sudeepa (@KicchaSudeep) January 29, 2024
ಬಿಗ್ ಬಸ್ ರಿಲೀಫ್ ಬಳಿಕ ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಸಿನೆಮಾದಲ್ಲಿ ಶೂಟಿಂಗ್ ನಲ್ಲಿ ಬಹಳಷ್ಟು ಬ್ಯೂಸಿ ಇದ್ದಾರೆ. ಮ್ಯಾಕ್ಸ್ ಸಿನೆಮಾ ಬಹುಮಟ್ಟಿಗೆ ಸೆಟ್ ಏರಿದ್ದು ಅನೇಕ ತಾರಾಗಣ ಈ ಸಿನೆಮಾದಲ್ಲಿ ಪ್ರಧಾನ ಪಾತ್ರ ನಿರ್ವಹಿಸಲಿದೆ. ಇದರಲ್ಲಿ ಸುದೀಪ್ ಅವರಿಗೆ ಪೊಲೀಸ್ ಪಾತ್ರ ಇರಲಿದ್ದು ವಿಭಿನ್ನ ಕತೆಗೆ ಕಾಲಿವುಡ್ ನ ನಿರ್ದೇಶಕ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಕಾಟೇರ ಬಳಿಕ ದರ್ಶನ್ ಕೂಡ ವೈಯಕ್ತಿಕ ಹಾಗೂ ಸಿನೆಮಾ ವಿಚಾರವಾಗಿ ತುಂಬಾ ಬ್ಯೂಸಿಇದ್ದಾರೆ.