Shree Anna Yojana: ರೇಷನ್ ವಿತರಣೆಯಲ್ಲಿ ಮಹತ್ವದ ಬದಲಾವಣೆ, ಇನ್ಮುಂದೆ ಹೆಚ್ಚುವರಿ ಅಕ್ಕಿ ಸಿಗಲ್ಲ!
![](https://karnatakatimes.com/wp-content/uploads/2024/01/Significant-change-in-ration-distribution.jpg)
advertisement
ಬಡವರ್ಗದ ಜನತೆಯನ್ನು ಆರ್ಥಿಕ ವಾಗಿ ಸಬಲ ಮಾಡುವ ಉದ್ದೇಶ ದಿಂದ ಬಡತನ ವರ್ಗದ ಕೆಳಗಿರುವ ಜನತೆಗೆ ಅನ್ನಭಾಗ್ಯ ಯೋಜನೆ (Anna Bhagya Yojana) ಅನ್ನು ಸರಕಾರ ಜಾರಿಗೆ ತಂದಿದೆ. ಇನ್ನೂ ರೇಷನ್ ಕಾರ್ಡ್ (Ration Card) ಹೊಂದಿದ್ದರೆ ಮಾತ್ರ ಈ ಸೌಲಭ್ಯ ಜನತೆಗೆ ದೊರೆಯುತ್ತದೆ. ಹಾಗಾಗಿ ಸರಕಾರದ ಯಾವುದೇ ಸೌಲಭ್ಯ ಪಡೆಯಲು ಈ ರೇಷನ್ ಕಾರ್ಡ್ ಬೇಕು. ಇಂದು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ರೇಷನ್ ಕಾರ್ಡ್ಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ ಎಂದು ಹೇಳಬಹುದು.
PM Garib Kalyan Yojana:
ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ (PM Garib Kalyan Yojana) ಪ್ಯಾಕೇಜ್ ಮೂಲಕ ಆಹಾರ ಧಾನ್ಯಗಳನ್ನು ಜನತೆಗೆ ನೀಡುತ್ತಿದೆ. 2013 ರ ಅಡಿಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಎಂದು ಹೆಸರಿಸಿಟ್ಟಿದ್ದು ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ಸಹ ಇದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಪ್ರತೀ ತಿಂಗಳು 5 ಕಿಲೋನಷ್ಟು ಆಹಾರಧಾನ್ಯಗಳನ್ನು ಉಚಿತವಾಗಿ ಕೊಡಲಾಗುತ್ತದೆ.
Shree Anna Yojana:
advertisement
ಇದೀಗ ಕೇಂದ್ರ ಸರ್ಕಾರವು ಮಧ್ಯಮ ವರ್ಗದ ಜನತೆಗೆ ಶ್ರೀ ಅನ್ನ ಯೋಜನೆ (Shree Anna Yojana) ಯನ್ನು ಜಾರಿಗೆ ತಂದಿದೆ. ಪಡಿತರ ಚೀಟಿದಾರರಿಗೆ ಫೆಬ್ರವರಿಯಿಂದ ಪಡಿತರದ ಜೊತೆಗೆ ಸಿರಿಧಾನ್ಯಗಳನ್ನು ವಿತರಣೆ ಮಾಡಲು ಕೇಂದ್ರ ಸರಕಾರ ಇದೀಗ ಮುಂದಾಗಿದೆ. ಈ ಯೋಜನೆ ಅಡಿಯಲ್ಲಿ ಗೋಧಿ ಮತ್ತು ಅಕ್ಕಿಯ ಜೊತೆಗೆ, ಸಿರಿ ಧಾನ್ಯಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ.
ಹೆಚ್ಚುವರಿ ಅಕ್ಕಿಯ ಬದಲಾಗಿ ಸಿರಿ ಧಾನ್ಯ:
ಈ ಹೊಸ ಯೋಜನೆಯಡಿ ಪಡಿತರ (Ration) ಪಡೆಯುವ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿ ಅದರ ಬದಲಿಗೆ ಸಿರಿ ಧಾನ್ಯಗಳನ್ನು ನೀಡಲಾಗುತ್ತದೆ. ಮದ್ಯಮ ವರ್ಗದ ಜನತೆಗೂ ಆಹಾರದಲ್ಲಿ ಸಿರಿ ಧಾನ್ಯಗಳನ್ನು ನೀಡುವಲ್ಲಿ ಉತ್ತೇಜಿಸಲು ಸರ್ಕಾರ ಒತ್ತು ನೀಡುತ್ತಿದೆ. ಈ ಹಿಂದೆ ಅಂತ್ಯೋದಯ ಕಾರ್ಡ್ ಹೊಂದಿದ್ದ ಅವರಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಗೋಧಿ ಸಿಗುತ್ತಿತ್ತು, ಇದೀಗ ಇದರ ಬದಲು ಒಂಬತ್ತು ಕೆಜಿ ಗೋಧಿ ಮತ್ತು ಐದು ಕೆಜಿ ಸಿರಿಧಾನ್ಯಗಳನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.
advertisement