Lakshmi Devi: ಲಕ್ಷ್ಮಿ ದೇವಿಯ ನಿಮ್ಮ ಮನೆಗೆ ಬರುವಳೆಂಬ ಸೂಚನೆ ನೀಡುವ ಚಿಹ್ನೆಗಳಿವು.
ಹಿಂದೂ ಧರ್ಮದವರು ಲಕ್ಷ್ಮಿ ದೇವಿ (Lakshmi Devi) ಯನ್ನು ಸಂಪತ್ತಿನ ದೇವತೆ ಮತ್ತು ಅದೃಷ್ಟದ ದೇವತೆ ಎಂದು ಪರಿಗಣಿಸುತ್ತಾರೆ. ಮತ್ತೊಂದೆಡೆ, ಸಾಪ್ತಾಹಿಕ ದಿನಗಳಲ್ಲಿ ಲಕ್ಷ್ಮಿ ದೇವಿಯ ದಿನವನ್ನು ಶುಕ್ರವಾರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಭಕ್ತನು ಸಂಪತ್ತು ಮತ್ತು ಖ್ಯಾತಿಯನ್ನು ಪಡೆಯುತ್ತಾನೆ. ಲಕ್ಷ್ಮಿ ದೇವಿಯ ಕೃಪೆಯಿಂದ ವ್ಯಕ್ತಿಯ ಬಡತನ ದೂರವಾಗುತ್ತದೆ. ಶಾಸ್ತ್ರಗಳ ಪ್ರಕಾರ, ಲಕ್ಷ್ಮಿ ದೇವಿಯು ನಿಮ್ಮ ಸಾಧನೆಯಿಂದ ಸಂತೋಷಗೊಂಡಾಗ, ನೀವು ಸಂಜೆ ಕೆಲವು ಮಂಗಳಕರ ಚಿಹ್ನೆಗಳನ್ನು ನೋಡ ಬಹುದಾಗಿದೆ. ಅಂತಹ ಚಿಹ್ನೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ.
ಸನಾತನ ಧರ್ಮದಲ್ಲಿ ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಸಂಬೋಧಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದ ಕುಟುಂಬವು ಆರ್ಥಿಕ ಮುಗ್ಗಟ್ಟನ್ನು ಎದುರಿಸುವುದಿಲ್ಲ ಎಂದು ನಂಬಲಾಗಿದೆ. ತಾಯಿ ಲಕ್ಷ್ಮಿಯ ಅನುಗ್ರಹದಿಂದ, ಸಾಧಕನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಲಕ್ಷ್ಮಿ ದೇವಿಯ ಆಗಮನದ ಮೊದಲು, ಒಬ್ಬ ವ್ಯಕ್ತಿಯು ಕೆಲವು ಚಿಹ್ನೆಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ, ಆ ಶುಭ ಚಿಹ್ನೆಗಳು ಯಾವುವು ಎಂದು ತಿಳಿದರೆ ನೀವು ಆಶ್ಚರ್ಯ ಪಡೋದಂತು ಸತ್ಯ.
ಹಕ್ಕಿಯ ಗೂಡು
ಕೆಲವು ಬಾರಿ ಮನೆಯ ಮಾಳಿಗೆ ಮೇಲೆ ಇಲ್ಲವೇ ಮನೆಯ ಸಂದಿಯಲ್ಲಿ ಹಕ್ಕಿಗಳ ಗೂಡು ಕಟ್ಟುತ್ತವೆ. ಸಂಜೆಯ ವೇಳೆ ನಿಮ್ಮ ಮನೆಯೊಳಗೆ ಅಥವಾ ಸುತ್ತಮುತ್ತ ಹಕ್ಕಿಯ ಗೂಡು ಕಂಡರೆ ಅದನ್ನು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಆಗಮಿಸಲಿದ್ದಾಳೆ, ಇದರಿಂದ ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ ಎನ್ನುವ ಸೂಚನೆ ಇದಾಗಿದೆ.
ಹಲ್ಲಿಯ ದರ್ಶನ
ಎಲ್ಲರ ಮನೆಯಲ್ಲಿ ಹಲ್ಲಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಸೂರ್ಯಾಸ್ತದ ನಂತರ ನೀವು ಮೂರು ಹಲ್ಲಿಗಳನ್ನು ಒಟ್ಟಿಗೆ ನೋಡಿದರೆ, ಅದು ಸಂಪತ್ತಿನ ಆಗಮನದ ಸಂಕೇತವೂ ಆಗಿರಬಹುದು. ನೀವು ಶೀಘ್ರದಲ್ಲೇ ಹಣಕಾಸಿನ ಸಮಸ್ಯೆಗಳಿಂದ ಪಾರಾಗುತ್ತಿರಿ ಇಲ್ಲವೇ ಬೇರೆ ಮೂಲಗಳಿಂದ ನಿಮಗೆ ಹಣ ಸಂದಾಯ ಆಗೋದ್ರಲ್ಲಿ ಎರಡು ಮಾತಿಲ್ಲ.
ಕಪ್ಪು ಇರುವೆಗಳು ಮನೆಯ ಮುಂದೆ ಬಂದಾಗ
ಸಂಜೆಯ ವೇಳೆ ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳ ಹಿಂಡು ಕಂಡರೆ, ಅದನ್ನು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಶೀಘ್ರದಲ್ಲೇ ನಿಮ್ಮ ಕುಟುಂಬವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲಿದೆ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ, ಆ ಇರುವೆಗಳನ್ನು ಓಡಿಸುವ ಬದಲು, ನೀವು ಸಕ್ಕರೆ ಅಥವಾ ಹಿಟ್ಟನ್ನು ಹಾಕಬೇಕು. ಇದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ.
ಕೆಲ ಕನಸುಗಳು ಬರಲು ಪ್ರಾರಂಭಿಸಿದಾಗ
ನಿಮ್ಮ ಕನಸಿನಲ್ಲಿ ಕೊಳಲು, ಕಮಲ, ಗುಲಾಬಿ ಹೂವು ಅಥವಾ ಪೊರಕೆಯನ್ನು ನೀವು ನೋಡಲು ಪ್ರಾರಂಭಿಸಿದರೆ, ಅದು ಲಕ್ಷ್ಮಿ ದೇವಿಯ ಆಗಮನದ ಸಂಕೇತವೂ ಆಗಿರಬಹುದು. ಅಂತಹ ಕನಸುಗಳು ಬಂದಾಗ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ನಡೆಯುತ್ತಿರುವ ಹಣದ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಹಾಗೂ ಹೆಚ್ಚಿನ ಹಣ ಗಳಿಸಿ ನೆಮ್ಮದಿಯ ಜೀವನ ನಡೆಸುತ್ತಾನೆ.