Karnataka Times
Trending Stories, Viral News, Gossips & Everything in Kannada

Pavithra Gowda: ತನ್ನ ಹಾಗೂ ದರ್ಶನ ನಡುವಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಪವಿತ್ರಾ ಗೌಡ!

advertisement

ದರ್ಶನ್ ಶ್ರೀನಿವಾಸ್ (Darshan Srinivas) ಅವರ ಮಗಳು ಖುಷಿ ಗೌಡ ಎಂದು ನಾನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಪವಿತ್ರ ಗೌಡ (Pavithra Gowda) ಇದೀಗ Instagram ನಲ್ಲಿ ಸುದೀರ್ಘವಾಗಿರುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರ ಪತ್ನಿಯ ಹೆಸರಿನಲ್ಲಿ ಇರುವ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಎನ್ನುವ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಜನರು ಬಹಳ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವುದನ್ನು ನೋಡಿ ನೊಂದ ಪವಿತ್ರ ಗೌಡ ಈಗ ಈ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪವಿತ್ರ ಗೌಡ (Pavithra Gowda) ಹೇಳಿದ್ದೇನು?

ನಾನು ಸಂಜಯ್ ಎನ್ನುವ ವ್ಯಕ್ತಿಯನ್ನು ಮದುವೆಯಾಗಿದೆ. ಅದಾದ ನಂತರ ನನ್ನ ಮಗಳು ಖುಷಿ ಗೌಡ ಹುಟ್ಟಿದ್ದು ನಮ್ಮ ಲೈಫಿನಲ್ಲಿ ಉಂಟಾದ ಸಮಸ್ಯೆಯಿಂದಾಗಿ ನಾನು ಅವರಿಂದ ವಿಚ್ಛೇದನ ಪಡೆದಿದ್ದೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ.

 

 

ನಾನು ಹಾಗೂ ದರ್ಶನ್ (Darshan) ಅವರು ಕಳೆದ ಹತ್ತು ವರ್ಷಗಳಿಂದಲೂ ಜೊತೆಯಾಗಿ ಖುಷಿಯಾಗಿ ಇದ್ದೇವೆ. ಇದನ್ನು ಗಮನಿಸಿ, I am not here for any own person needs and agenda, it’s all about pure love and care been for 10 years it’s not at all easy. ನನ್ನ ಹಾಗೂ ದರ್ಶನ ಅವರ ವಿಚಾರ ದರ್ಶನವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಈ ಹಿಂದೆಯೇ ತಿಳಿದಿದೆ. ವಿಜಯಲಕ್ಷ್ಮಿ ಅವರು ಹಲವು ಬಾರಿ ನನಗೆ ಕಾಲ್ ಮಾಡಿ ಮಾತನಾಡಿದ್ದಾರೆ. ಅವರಿಗೆ ನಮ್ಮ ಸಂಬಂಧದಿಂದ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ತಿಳಿಸಿದ್ದಾರೆ.

advertisement

ಇದೀಗ ವಿಜಯಲಕ್ಷ್ಮಿ ಅವರು ನನ್ನ ವಿರುದ್ಧವಾಗಿ ಪೋಸ್ಟ್ ಹಾಕುತ್ತಿರುವುದು ನನಗೆ ಬಹಳ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ಟೀನೇಜ್ ಮಗಳಾಗಿರುವ ಖುಷಿ ಗೌಡ ಅವರ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಎನ್ನುವ Instagram ಪೋಸ್ಟ್ ನಲ್ಲಿ ಬಹಳ ಕೆಟ್ಟದಾಗಿ ನಿಂದಿಸುವ ಮಾತುಗಳು ನನಗೆ ನೋವನ್ನು ಉಂಟುಮಾಡಿದೆ.

ನನ್ನ ಜೀವನದ ಹಳೆಯ ವಿಚಾರ ಹಾಗೂ ಪರ್ಸನಲ್ ಫೋಟೋಗಳನ್ನು ಯಾರು ಕೂಡ ಪೋಸ್ಟ್ ಮಾಡುವ ಹಕ್ಕು ಇಲ್ಲ. ನನಗೆ ಇದೆಲ್ಲದರ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುವ ಹಕ್ಕು ಇದೆ ಆದರೆ ನಾನು ಇದನ್ನ ದೊಡ್ಡದು ಮಾಡುವುದಿಲ್ಲ, ಎಚ್ಚರ ಇರಲಿ ನಾನು ಪ್ರೀತಿಸುವವರ ಜೊತೆಗೆ ಸಂತೋಷವಾಗಿ ಇರಬೇಕೆಂದು ನಿಶ್ಚಯಿಸಿದ್ದೇನೆ. ಹಾಗಾಗಿ ನಾನು ಮುಂದೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಮಾಡಿಕೊಡಬೇಡಿ. ಎನ್ನುವಂತಹ ಪೋಸ್ಟ್ ಅನ್ನು ಪ್ರಿಯಾ ಗೌಡ ಹಂಚಿಕೊಂಡಿದ್ದಾರೆ.

ಕೊನೆಯಲ್ಲಿ, I hope you all know about problems between them what and all he had gone through, even before I came in to his life, please recall it ಎಂದು ಹೇಳಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಟ್ಯಾಗ್ ಮಾಡಿದ್ದಾರೆ.

Self respect is more important than anything ಎನ್ನುವುದಾಗಿ ಬರೆದುಕೊಂಡಿರುವ ಪವಿತ್ರ ಗೌಡ ತನ್ನ ಮನಸ್ಸಿನ ಭಾವನೆಗಳನ್ನು ಸುದೀರ್ಘವಾದ ಪೋಸ್ಟ್ ಬರೆದುಕೊಳ್ಳುವುದರ ಮೂಲಕ ಹಂಚಿಕೊಂಡಿದ್ದಾರೆ.

 

 

ಎಷ್ಟು ದಿನ ಬೂದಿ ಮುಚ್ಚಿದ ಕೆಂಡದಂತೆ ಇದ್ದ ದರ್ಶನ್ ಹಾಗೂ ಪವಿತ್ರ ಗೌಡ ಅವರ ಸಂಬಂಧ ಈಗ ಮತ್ತೆ ತೆರೆದುಕೊಳ್ಳುತ್ತಿದೆ. ಈ ವಿಚಾರದಲ್ಲಿ ದರ್ಶನ್ ಅವರ ಪ್ರತಿಕ್ರಿಯೆ ಇನ್ನೂ ಹೊರ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ದರ್ಶನ್ ಹಾಗೂ ಅವರ ಸಂಬಂಧಿಕರು ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

advertisement

Leave A Reply

Your email address will not be published.