Ration Card: ರೇಷನ್ ಕಾರ್ಡ್ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ಮಾಡಿದ ಸರ್ಕಾರ! ಇಂತಹವರಿಗೆ ಸಿಗೋಲ್ಲ BPL ಕಾರ್ಡ್.
ಲಾಕ್ಡೌನ್ ಸಂದರ್ಭದಲ್ಲಿ ಕೂಡ ಪ್ರಾರಂಭಿಸಿ ದೇಶದಾದ್ಯಂತ ಸರ್ಕಾರ ರೇಷನ್ ಕಾರ್ಡ್ (Ration Card) ಅನ್ನು ಹೊಂದಿರುವವರಿಗೆ ಉಚಿತ ಪಡಿತರವನ್ನು ನೀಡಿಕೊಂಡು ಬರುತ್ತಿದೆ. ಇನ್ನು ಹೊಸ ನಿಯಮಗಳ ಪ್ರಕಾರ ಕೆಲವೊಂದು ಅನರ್ಹರಿಗೆ ಈ ರೀತಿ ಉಚಿತ ಪಡಿತರವನ್ನು ನೀಡುವುದನ್ನ ರದ್ದು ಮಾಡುವಂತಹ ಯೋಜನೆ ಕೂಡ ನಡೆಯುತ್ತಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತಹ ಪ್ರಯತ್ನವನ್ನು ಮಾಡೋಣ.
ಇಂಥವರಿಗೆ ರೇಷನ್ ಕಾರ್ಡ್ ಆಗುತ್ತೆ ರದ್ದು!
ಪಡಿತರ ಚೀಟಿಯಲ್ಲಿ ಬೇರೆ ಬೇರೆ ರೀತಿಯ ರೇಷನ್ ಕಾರ್ಡ್ ಗಳನ್ನು ನೀವು ಕಾಣಬಹುದಾಗಿದ್ದು ಅರ್ಹತೆಯನ್ನು ಹೊಂದಿರುವವರಿಗೆ ಸರಿಯಾದ ರೀತಿಯಲ್ಲಿ ರೇಷನ್ ಕಾರ್ಡ್ (Ration Card) ಅನ್ನು ಒದಗಿಸಲಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಆದರೆ ಇಲ್ಲಿರುವಂತಹ ಮತ್ತೊಂದು ಬೇಸರದ ವಿಚಾರ ಅಂದ್ರೆ ಅರ್ಹರಾಗಿಲ್ಲದೆ ಇದ್ದರೂ ಕೂಡ ಬಡತನದ ರೇಖೆಗಿಂತ ಮೇಲಿರುವವರು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಬಳಸಿಕೊಳ್ಳುತ್ತಿದ್ದಾರೆ.
ಇದನ್ನು ಗಮನಿಸಿರುವ ಅಂತಹ ಸರ್ಕಾರ ಇಂತಹ ಅರ್ಹರಾಗಿಲ್ಲದೆ ಇರುವಂತಹ ವ್ಯಕ್ತಿಗಳ ಬಳಿ ಇರುವ ಬಿಪಿಎಲ್ ರೇಷನ್ ಕಾರ್ಡ್ ಅನ್ನು ರದ್ದು ಮಾಡುವಂತ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದೆ. ಆಹಾರ ಇಲಾಖೆಯಿಂದ ಈ ರೀತಿ ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ಅನ್ನು ರದ್ದು ಮಾಡುವಂತಹ ತನಿಖೆಯನ್ನು ನಡೆಸುತ್ತಿದ್ದು ಯಾರೆಲ್ಲ ಈ ತನಿಖೆಯಲ್ಲಿ ಸಿಕ್ಕಿ ಬೀಳುತ್ತಾರೋ ಅವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿ ಅವರಿಗೆ ಸಿಗುವಂತಹ ಪ್ರತಿಯೊಂದು ಸೌಲಭ್ಯಗಳನ್ನು ಕೂಡ ಕ್ಯಾನ್ಸಲ್ ಮಾಡುವಂತಹ ಯೋಜನೆಗೆ ಮುಂದಾಗಿದೆ.
ಯಾರಿಗೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಸಿಗೋ ಹಾಗಿಲ್ಲ?
ನೂರು ಚದರ ಮೀಟರ್ ಪ್ಲಾಟ್ ಅಥವಾ ಪ್ರಾಪರ್ಟಿಯನ್ನು (Property) ಹೊಂದಿರುವ ಹಾಗಿಲ್ಲ. ನಾಲ್ಕು ಚಕ್ರದ ವಾಹನ (Four Wheeler) ಅಥವಾ ಟ್ರ್ಯಾಕ್ಟರ್ (Tractor) ಅನ್ನು ಹೊಂದಿರುವ ಹಾಗಿಲ್ಲ ಹಾಗೂ ಶಸ್ತ್ರಾಸ್ತ್ರಗಳ ಪಡೆದುಕೊಳ್ಳುವ ಹಾಗಿಲ್ಲ. ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ರೆ ಹಾಗೂ ಸರ್ಕಾರಿ ಕೆಲಸದಲ್ಲಿ ಇರುವವರೆಗೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದು ಹಾಗಿಲ್ಲ ಎನ್ನುವಂತಹ ನಿಯಮ ಇದ್ದು ಅವರು ತಹಶೀಲ್ದಾರರ ಕಚೇರಿಗೆ ಹೋಗಿ ತಮ್ಮ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಸರೆಂಡರ್ ಮಾಡ ಬೇಕಾಗಿರುತ್ತದೆ.
ಒಂದು ವೇಳೆ ಈ ರೀತಿಯ ನಿಯಮಗಳನ್ನು ಕೇಳಿಸಿಕೊಂಡ ನಂತರ ಕೂಡ ಅಕ್ರಮ ವಿಧಾನದಿಂದ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಹೊಂದಿದ್ದು ಅದರಿಂದ ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ ಅವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿಸುವುದು ಮಾತ್ರವಲ್ಲದೆ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೂಡ ಸರ್ಕಾರ ಕೈ ತೆಗೆದುಕೊಳ್ಳಲಿದೆ.
ಇದರ ಜೊತೆಗೆ ನೀವು ಈಗಾಗಲೇ ಪಡೆದಿರುವಂತಹ ಪಡಿತರವನ್ನು ಕೂಡ ನಿಮ್ಮಿಂದ ವಸೂಲಿ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಲಿದೆ. ಈಗ ನೀಡುತ್ತಿರುವ ಉಚಿತ ಪಡಿತರ ಆಹಾರ ವಸ್ತುಗಳನ್ನು ಸರ್ಕಾರ ಮುಂದಿನ ಮೂರರಿಂದ ಆರು ತಿಂಗಳಿಗಳಿಗೆ ವಿಸ್ತರಿಸಬಹುದಾದಂತಹ ಸಾದ್ಯತೆ ಕೂಡ ಇದು ಇದಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದೆ.