Road Accident: ರಸ್ತೆ ಅಪಘಾತ ವಾದರೆ ಇನ್ಮೇಲೆ ಹೊಸ ರೂಲ್ಸ್! ದೇಶಕ್ಕೆ ಕೇಂದ್ರದ ಹೊಸ ಘೋಷಣೆ
ಇತ್ತೀಚಿನ ದಿನದಲ್ಲಿ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದೆ. ಅಪಘಾತದ ಸಂಖ್ಯೆ ಹೆಚ್ಚಾಗಲು ಕೆಲವೊಮ್ಮೆ ವೈಯಕ್ತಿಕ ಬೇಜವಾಬ್ದಾರಿ ಇದ್ದರೆ ಇನ್ನೂ ಕೆಲವೊಮ್ಮೆ ಅಪಘಾತ ವಲಯಗಳು ಎಂಬ ಸ್ಥಳಗಳಲ್ಲಿ ಅಪಘಾತ ನಡೆದು ಬಿಡುತ್ತದೆ. ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಅಪಘಾತ ಸಂಖ್ಯೆ ತಗ್ಗುತ್ತಿಲ್ಲ ಎಂದು ಹೇಳಬಹುದು.ಅದಕ್ಕಾಗಿ ಅಪಘಾತ ಪ್ರಮಾಣ ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಪಘಾತ ತಡೆಹಿಡಿಯಲು ಈಗಾಗಲೇ ಸಾಕಷ್ಟು ಕ್ರಮ ಜಾರಿಗೆ ತರಲು ಮುಂದಾಗಿವೆ.
ಅಪಘಾತ ಆದವರಿಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋದರೆ ಕೋರ್ಟ್ ಕೇಸು, ಪೊಲೀಸ್ ಠಾಣೆ ಎಂದು ಅಲೆಯಬೇಕಾಗುತ್ತದೆ. ಹೀಗಾಗಿ ಅಪಘಾತ ನಡೆದ ಬಳಿಕ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಚಿಕಿತ್ಸೆಗೆ ಸೇರಿಸಲು ಜನರು ಹಿಂದೇಟು ಹಾಕುತ್ತಿದ್ದು ಅನೇಕ ವ್ಯಕ್ತಿಗಳು ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಈ ನೆಲೆಯಲ್ಲಿ ಕೇಂದ್ರ ಸರಕಾರವು ವಿಶೇಷ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವುದು ಈ ನೂತನ ಯೋಜನೆ?
ರಸ್ತೆ ಅಪಘಾತಕ್ಕೆ (Road Accident) ತುತ್ತಾದವರಿಗೆ ಶೀಘ್ರ ಚಿಕಿತ್ಸೆ ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ನೂತನ ಯೋಜನೆ ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಕೆಲವು ಸರಕಾರಿ ಮಾಧ್ಯಮ ಮೂಲಗಳು ಮಾಹಿತಿ ನೀಡುತ್ತಿವೆ. ಈ ಯೋಜನೆಯ ಹೆಸರು ಗೋಲ್ಡನ್ ಅವರ್ ಟ್ರೀಟ್ಮೆಂಟ್ ಎಂದಾಗಿದ್ದು ಅಪಘಾತ ನಡೆದ ಒಂದು ಘಂಟೆ ಒಳಗೆ ಆಸ್ಪತ್ರೆಗೆ ಆ ವ್ಯಕ್ತಿಯನ್ನು ದಾಖಲಿಸಿದರೆ, 7 ದಿನದ ಚಿಕಿತ್ಸಾ ವೆಚ್ಚ ಅಥವಾ 1.5ಲಕ್ಷದ ವರೆಗೆ ಚಿಕಿತ್ಸಾ ಸೌಲಭ್ಯವನ್ನು ಅವರು ಪಡೆಯಲಿದ್ದಾರೆ.
ದೇಶಾದ್ಯಂತ ಜಾರಿ:
ಈ ಒಂದು ಹೊಸ ಯೋಜನೆಯನ್ನು ಸರಕಾರವು ಮೋಟಾರ್ ವಾಹನಗಳ ಕಾಯ್ದೆ 2019 ರಭಾಗವಾಗಿ ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ. ಮೊದಲ ಒಂದು ಗಂಟೆಯ ಚಿಕಿತ್ಸೆ ಬಹಳ ಅಗತ್ಯ ಎಂಬುದನ್ನು ಒತ್ತಿ ಹೇಳುವ ಸಲುವಾಗಿ Golden Hours Treatment ಎಂದು ಹೆಸರಿಸಲಾಗಿದೆ. ಮೊದಲ ಹಂತದಲ್ಲಿ ಹರಿಯಾಣ ಮತ್ತು ಚಂಡೀಗಢದಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು ಮುಂದಿನ ದಿನದಲ್ಲಿ ದೇಶ ವ್ಯಾಪಿ ಬರಲಿದೆ.
ಪ್ರಮುಖ ಗುರಿ:
ಅಪಘಾತ ನಡೆದ ಸಂದರ್ಭದಲ್ಲಿ ವ್ಯಕ್ತಿಗೆ ತುರ್ತು ಚಿಕಿತ್ಸೆಯನ್ನು ಶೀಘ್ರವಾಗಿ ನೀಡಿ ಅಪಘಾತದಲ್ಲಿ ಮರಣ ಹೊಂದುವ ಪ್ರಮಾಣ ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದರ ಮೂಲಕ ರಸ್ತೆ ಅಪಘಾತ (Road Accident) ದಲ್ಲಿ ಸಾವಿನ ಸಂಖ್ಯೆಯನ್ನು 50% ನಷ್ಟು ಕಡಿಮೆ ಮಾಡಬೇಕು ಎಂಬ ಮಹತ್ವದ ಗುರಿಯನ್ನು ಹೊಂದಿರುವುದನ್ನು ನಾವು ಕಾಣಬಹುದು.