Karnataka Times
Trending Stories, Viral News, Gossips & Everything in Kannada

Anna Bhagya: ಅನ್ನ ಭಾಗ್ಯ ಹಣ ಇಂತವರಿಗೆ ಮಾತ್ರ ಈ ತಿಂಗಳು ಜಮೆ!

advertisement

ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಐದು ಗ್ಯಾರಂಟಿ ಯೋಜನೆಗಳ ಪ್ರಾಣಾಳಿಕೆಯನ್ನು ನೀಡುವ ಮೂಲಕ ಜನರಿಗೆ ಭರವಸೆ ನೀಡಿತ್ತು. ಆ ಭರವಸೆಯನ್ನು ಚುನಾವಣೆ ಗೆದ್ದ ನಂತರದಲ್ಲಿ ಕಾಂಗ್ರೆಸ್ ಸರಕಾರವು ನೇರವಿರಿಸಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸುವ ಮೂಲಕ ಹೆಚ್ಚು ಸುದ್ದಿ ಮಾಡುತ್ತಿದ್ದು ಅದರಲ್ಲಿ ಅನ್ನ ಭಾಗ್ಯ ಯೋಜನೆ (AnnaBhagya Scheme) ಯ ಹಣ ಜಮೆಯಾಗದ ಬಗ್ಗೆ ಹೆಚ್ಚಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಹಣ ಜಮೆ ಮಾಡುತ್ತಿದೆ

ಅನ್ನಭಾಗ್ಯ ಯೋಜನೆ (AnnaBhagya Scheme) ನೀಡುವ ಕುರಿತು ಸರಕಾರ ಭರವಸೆ ಕೊಟ್ಟಿದ್ದರೂ, ಅಕ್ಕಿ ಕೊರತೆಯ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಸ್ವಲ್ಪ ಬದಲಾವಣೆಯನ್ನು ಮಾಡಿದ್ದು, 5 ಕೆಜಿ ಅಕ್ಕಿಯ ಜೊತೆಗೆ ಉಳಿದ 5 ಕೆಜಿಯ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಗಳ ದರದಲ್ಲಿ ಹಣವನ್ನು ಸರ್ಕಾರ ಪಾವತಿಸುತ್ತಿದೆ.

ಅನ್ನಭಾಗ್ಯ (Anna Bhagya) ಹಣ ಜಮೆಯಾಗಿಲ್ಲ

advertisement

ಅನೇಕರಿಗೆ ಜನವರಿ ,ಫೆಬ್ರವರಿ ತಿಂಗಳ ಅನ್ನಭಾಗ್ಯದ ಹಣ ತಾಂತ್ರಿಕ ದೋಷದಿಂದ ಖಾತೆಗೆ ಜಮೆ ಯಾಗಿರಲಿಲ್ಲ. ಹೌದು ಕೆಲವೊಂದು ಫಲಾನುಭವಿಗಳ ರೇಷನ್ ಕಾರ್ಡ್ (Ration Card) ನಲ್ಲಿ ಮನೆಯ ಹಿರಿಯ ಸದಸ್ಯರ ಆಕೌಂಟ್ ನಿಷ್ಕ್ರಿಯ, ಆಧಾರ್ ಸಮಸ್ಯೆ, ಕೆ ವೈಸಿ ಸಮಸ್ಯೆ ಇತ್ಯಾದಿ ಇತ್ತು. ಅದೇ ರೀತಿ ಬ್ಯಾಂಕ್ ಖಾತೆಯಲ್ಲಿ ಹೆಸರು ಮತ್ತು ಆಧಾರ್ ಕಾರ್ಡ್‍ನಲ್ಲಿರುವ ಹೆಸರು ಹಾಗೂ ಪಡಿತರ ಚೀಟಿಯಲ್ಲಿ ಮನೆಯ ಯಜಮಾನ ನ ಹೆಸರು ಹೊಂದಾಣಿಕೆ ಆಗದೆ ಇದ್ದವರಿಗೂ ಹಣ ಜಮೆಯಾಗಿಲ್ಲ. ಅದೇ ರೀತಿ ಹೆಚ್ಚಿನ ಜನರು ಆಧಾರ್ ಆಪ್ಡೆಡ್ ಮಾಡಿದ್ದು ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಿಲ್ಲ. ಹೀಗಾಗಿ ಹಣ ಜಮೆ ಯಾಗಿಲ್ಲ.ಈ ಸಮಸ್ಯೆ ಇದ್ದರೆ ಈ ತಿಂಗಳೂ ಕೂಡ ಅನ್ನಭಾಗ್ಯ ಹಣ ಜಮೆ ಯಾಗಲ್ಲ.

ಯಾವಾಗ ಹಣ ಬರಲಿದೆ?

ಜನವರಿ, ಮತ್ತು ಪೆಬ್ರವರಿ ತಿಂಗಳ ಹಣ ಖಾತೆಗೆ ಜಮೆಯಾಗದೇ ಇದ್ದಲ್ಲಿ ಎರಡು ತಿಂಗಳ ಮತ್ತು ಈ ತಿಂಗಳ ಹಣ ಒಟ್ಟು ಮೊತ್ತ ‌ಜಮೆಯಾಗಲಿದೆ. ಈ ಹಣ ಈಗಾಗಲೆ ಬಿಡುಗಡೆ ಮಾಡಿದ್ದು ಹಣವು ಬ್ಯಾಂಕ್ ಖಾತೆಗೆ ಜಮಾ ಆಗದವರಿಗೆ ಮಾರ್ಚ್ ತಿಂಗಳಿನ 15 ದಿನಗಳ ಒಳಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ತಲುಪಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಪರಿಶೀಲನೆ ಮಾಡಿ

ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡಲು ನೀವು https://ahara.kar.nic.in/ ಈ ಲಿಂಕ್‌ ಬಳಸುವ ಮೂಲಕ ಈ ಲಿಂಕ್ ಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.