Transformers: ಕೃಷಿ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ ಫಾರ್ಮರ್ ಇದ್ದವರಿಗೆ ಗುಡ್ ನ್ಯೂಸ್! ಮತ್ತೆ ನಿಯಮ ಬದಲು
Transformers in Agricultural land in Karnataka: ಇಂದು ವಿದ್ಯುತ್ ಎನ್ನುವುದು ಎಲ್ಲ ಕ್ಷೇತ್ರದಲ್ಲಿ ಬಹಳ ಅಗತ್ಯದ ಒಂದು ಸಾಧನವಾಗಿದೆ. ವಿದ್ಯುತ್ ಅನ್ನು ಮನೆ , ಅಂಗಡಿ ಸೇರಿದಂತೆ ದೊಡ್ಡ ದೊಡ್ಡ ಸಂಸ್ಥೆ , ಔದ್ಯೋಗಿಕ ಕ್ಷೇತ್ರ ಎಲ್ಲ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ಇಂದು ಬಹಳ ಅಗತ್ಯ ಸ್ಥಾನ ಹೊಂದಿದೆ. ವಿದ್ಯುತ್ ಅನ್ನು ಕೃಷಿ ಕ್ಷೇತ್ರದಲ್ಲಿ ಬಳಕೆ ಮಾಡುವ ಕಾರಣದಿಂದ ಗದ್ದೆ ಮಧ್ಯದಲ್ಲಿ ವಿದ್ಯುತ್ ಕಂಬ ಮತ್ತು ಟ್ರಾನ್ಸ್ ಫಾರ್ಮರ್ ಅನ್ನು ಅಳವಡಿಕೆ ಮಾಡುವುದನ್ನು ನಾವು ಕಾಣಬಹುದು ಇದು ಕೃಷಿ ಕ್ಷೇತ್ರದಲ್ಲಿ ತೊಡಕು ಉಂಟಾದರು ವಿದ್ಯುತ್ ಅಗತ್ಯ ಪೂರೈಕೆಗೆ ಅಗತ್ಯವಾಗಿರಲಿದೆ.
ವಿದ್ಯುತ್ ಅನ್ನು ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡುವ ಹಿನ್ನೆಲೆ ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ಕಂಬ ನಿರ್ಮಾಣ ಮಾಡಿದ್ದರೆ ಅಂತಹ ರೈತರಿಗೆ ಈಗ ಶುಭ ಸುದ್ದಿಯೊಂದು ಸಿಗುತ್ತಿದೆ. ಇದು ಅಪಾಯಕಾರಿ ಆಗಿರುವ ಕಾರಣ ರೈತರ ಕೃಷಿ ಭೂಮಿಯಲ್ಲಿ ಅಳವಡಿಕೆ ಮಾಡುವ ಕಾರಣ ರೈತರಿಗೆ ವಿದ್ಯುತ್ ಇಲಾಖೆ ಹಾಗೂ ಸರಕಾರದಿಂದ ಕೆಲವೊಂದು ಪರಿಹಾರವನ್ನು ನೀಡಲಾಗುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಿದವರಿಗೆ ಪರಿಹಾರ ಮೊತ್ತ ಸಿಗಲಿದೆ.
ಎಷ್ಟು ಮೊತ್ತ ಸಿಗಲಿದೆ?
ವಾರಕ್ಕೆ 100 ರೂಪಾಯಿ ನಂತೆ ಜಮೀನಿನ ಮೇಲೆ ಟ್ರಾನ್ಸ್ ಫಾರ್ಮರ್ ಹಾಕಿದರೆ ಮೊತ್ತವನ್ನು ನೀಡಲಾಗುತ್ತದೆ. ಡೊಮೆಸ್ಟಿಕ್ ಪರ್ಪಸ್ ಗಾಗಿ 2000 ದಿಂದ 5000 ಯುನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ. ಅದರ ಜೊತೆಗೆ ಎಲೆಕ್ಟ್ರಾನಿಕ್ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ಲೈನ್ ನಲ್ಲಿ ಏನಾದರು ದೋಷ ಇದ್ದರೆ ಕಂಪ್ಲೆಂಟ್ ಮಾಡಿದ್ದ 48 ಗಂಟೆ ಒಳಗೆ ಅದನ್ನು ಸರಿ ಪಡಿಸಬೇಕು. ಒಂದು ವೇಳೆ ದೋಷ ಪರಿಹಾರ ಆಗದಿದ್ದರೆ ದಿನಕ್ಕೆ 50 ರೂಪಾಯಿ ಪರಿಹಾರ ಮೊತ್ತ ಸಿಗಲಿದೆ.
ಗುತ್ತಿಗೆ ವ್ಯವಸ್ಥೆ ಇದೆ
ಒಂದು ವೇಳೆ ರೈತನು ತನ್ನ ಜಮೀನಿನಲ್ಲಿ ವಿದ್ಯುತ್ ಕಂಬ ಹಾಕಲು ಯಾವುದೆ ತಕರಾರು ಇಲ್ಲ ಎಂದು NOC ನೀಡಿದರೆ ಆಗ ಕಂಪೆನಿ ಜೊತೆಗೆ ರೈತರಿಗೆ ಭೂ ಗುತ್ತಿಗೆ ಒಪ್ಪಂದದ ಅವಕಾಶ ನೀಡಲಾಗುವುದು. ಅದರ ಪ್ರಕಾರ ಹಣವನ್ನು ನೀಡಲಾಗುತ್ತದೆ. 5000 ರೂಪಾಯಿ ವರೆಗೆ ಗುತ್ತಿಗೆ ಮೊತ್ತ ನೀಡಲಾಗುತ್ತದೆ. ಅದರ ಜೊತೆಗೆ ಜಮೀನಿನ ಕಂಬದಿಂದ ಮನೆಗೆ ಸಂಪರ್ಕ ಮಾಡಲು ಕೂಡ ಅನೇಕ ವಿನಾಯಿತಿ ನಿಮಗೆ ಸಿಗಲಿದೆ . ಹೊಸ ಸಂಪರ್ಕ ನೀಡಲು ಖರ್ಚಿನ ವಿನಾಯಿತಿ ಸಹ ನಿಮಗೆ ಸಿಗಲಿದೆ.
ಒಟ್ಟಾರೆಯಾಗಿ ರೈತರ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ ಫಾರ್ಮರ್ ಹಾಕಿದವರಿಗೆ ಈಗ ಅನೇಕ ಸೌಲಭ್ಯ ಸಿಗುವ ಜೊತೆಗೆ ಅದೇ ರೀತಿ ಅಪಾಯ ಇರುವ ಕಾರಣದಿಂದಾಗಿ ಮುಂಜಾಗ್ರತಾ ಕ್ರಮ ವಹಿಸುವುದು ಕೂಡ ಬಹಳ ಮುಖ್ಯ ಎಂದು ಹೇಳಬಹುದು. ಹಾಗಾಗಿ ಎರಡೂ ಆಯಾಮದಲ್ಲಿ ಚಿಂತಿಸುವುದು ಬಹಳ ಅಗತ್ಯ ಎಂದು ಹೇಳಬಹುದು.