PM Kisan: ಈ ದಿನದಂದು ಬಿಡುಗಡೆಯಾಗಲಿದೆ ಪಿಎಂ ಕಿಸಾನ್ ಯೋಜನೆಯ 17ನೇ ಕಂತು
ಸರ್ಕಾರವು ಕೃಷಿಕರಿಗೆ ಸಹಾಯ ಮಾಡುವಂತಹ ಸಲುವಾಗಿ ಮತ್ತು ಅವರ ಕೃಷಿಗೆ ಪ್ರೋತ್ಸಾಹಿಸುವಂತಹ ಸಲುವಾಗಿ ಹಲವು ರೀತಿಯಾದಂತಹ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇನ್ನು ಅದರಂತೆ ರಾಜ್ಯ ಸರ್ಕಾರವು ಕೂಡ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವಂತಹ ಪಿಎಂ ಕಿಸಾನ್ (PM Kisan) ಯೋಜನಾ ಅಡಿಯಲ್ಲಿ ರಿಜಿಸ್ಟರ್ ಆಗಿರುವಂತಹ ರೈತರಿಗೆ ಪ್ರತಿ ತಿಂಗಳು ಕೂಡ ಎರಡು ಸಾವಿರ ರೂಪಾಯಿಗಳಷ್ಟು ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು.
PM Kisan 17th Installment:
ಇನ್ನು ಈವರೆಗೂ ರೈತರು ಅದರಿಂದ ಬಹಳಷ್ಟು ಸೌಲಭ್ಯವನ್ನು ಪಡೆದಿದ್ದಾರೆ. ಇನ್ನು ಇದರ ಮೂಲಕವಾಗಿ ರೈತರು ಹಲವು ಯೋಜನೆಗಳಲ್ಲಿ ರಿಜಿಸ್ಟರ್ ಮಾಡಿಸಿಕೊಂಡು ಸರ್ಕಾರದಿಂದ ಬರುವಂತಹ ಸೌಲಭ್ಯವನ್ನು ಪಡೆಯಬಹುದಾಗಿತ್ತು. ಇನ್ನು 16 ಕಂತುಗಳ ಹಣ ಈಗಾಗಲೇ ಎಲ್ಲಾ ರೈತರ ಖಾತೆಗೂ ಅಂದರೆ ನೋಂದಣಿ ಮಾಡಿಕೊಂಡಿರುವ ರೈತರ ಖಾತೆಗೆ 16 ಕಂತುಗಳ ಹಣ ಕ್ರೆಡಿಟ್ ಆಗಿದೆ. ಇನ್ನು 17ನೇ ಕಂತಿನ ಹಣ ಯಾವಾಗ ಬರುತ್ತದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಇನ್ನು ಈ 16 ಕಂತುಗಳು ಹಣ ಕೆಲವೊಬ್ಬರಿಗೆ ಸರಿಯಾಗಿ ಸಿಕ್ಕಿಲ್ಲ, ಕಾರಣ ಅವರು ತಮ್ಮ ಆಧಾರ್ ಕಾರ್ಡ್ ಅನ್ನು ನೋಂದಣಿಯೊಂದಿಗೆ ರಿಜಿಸ್ಟರ್ ಮಾಡಿಕೊಂಡಿಲ್ಲ ಇನ್ನು ಅವರು ನೀಡಿರುವಂತಹ ದಾಖಲೆಯ ಜೊತೆಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿಲ್ಲ ಎಂಬ ವಿಚಾರ ತಿಳಿದು ಬಂದಿದೆ. ಅಂಥವರು ಒಮ್ಮೆ ಪಿ ಎಂ ಕಿಸಾನ್ (PM Kisan)ಯೋಜನೆಯ ಅಫೀಶಿಯಲ್ ವೆಬ್ ಸೈಟ್ ಅಲ್ಲಿ ಅವರ ದಾಖಲೆಗಳು ಅಪ್ಡೇಟ್ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಇನ್ನು ಪರಿಶೀಲಿಸಿ ಆಧಾರ್ ಕಾರ್ಡ್ ಸೀಡಿಂಗ್ ಆಗಿದ್ದರೆ ಅಂತವರಿಗೆ ಇನ್ನು ಕೆಲವೇ ದಿನಗಳಲ್ಲಿ ಅವರ ಹದಿನಾರನೇ ಕಂತಿನ ಹಣವು ಕೊಡ ಬಂದು ತಲುಪಲಿದೆ. ಇನ್ನು ಕೆಲವು ತಾಂತ್ರಿಕ ದೋಷಗಳಿಂದಾಗಿ ಈ 16ನೇ ಕಂತಿನ ಹಣವು ಕೆಲವೊಬ್ಬರಿಗೆ ಸಿಕ್ಕಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ಈ ತಾಂತ್ರಿಕ ದೋಷಗಳನ್ನೆಲ್ಲವನ್ನು ಸರಿಪಡಿಸಿಕೊಂಡು ಹಣವನ್ನು ಕ್ರೆಡಿಟ್ ಮಾಡುವುದಾಗಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಇದನ್ನು ಹೊರತುಪಡಿಸಿ ಪಿಎಂ ಕಿಸಾನ್ ಯೋಜನೆಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿರುವಂತಹ ರೈತರು ತಮ್ಮ ಖಾತೆಗೆ ಈ- ಕೆವೈಸಿ ಅಪ್ಡೇಟ್ ಮಾಡುವಂತೆ ಕೂಡ ತಿಳಿಸಲಾಗಿದೆ. ಇದು ಕಡ್ಡಾಯ ಕೂಡ ಆಗಿದೆ. ಇನ್ನು ಈ ಬಾರಿ 17ನೇ ಕಂತಿನ ಹಣವನ್ನು ಏಪ್ರಿಲ್ ಮೇ ತಿಂಗಳ ಒಳಗಾಗಿ ಎಲ್ಲರ ಖಾತೆಗೆ ಕ್ರೆಡಿಟ್ ಮಾಡಲು ಸರ್ಕಾರ ಸೂಚನೆ ನೀಡಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.