Gruha Lakshmi: ಗೃಹಲಕ್ಷ್ಮಿ ಏಳನೇ ಕಂತಿನ ಹಣ ಬಿಡುಗಡೆ, ಇಂತವರಿಗೆ ಮಾತ್ರ ನಾಳೆ ಈ ಹಣ ಬಿಡುಗಡೆ
ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಮದ್ಯಮ ವರ್ಗದ ಜನತೆಗೆ ಬಹಳಷ್ಟು ಸಹಕಾರ ಯಾಗುತ್ತಿದೆ. ಗೃಹಜ್ಯೋತಿ ಮೂಲಕ ಉಚಿತ ವಿದ್ಯುತ್ ಸಿಕ್ಕರೆ, ಅನ್ನಭಾಗ್ಯ ಮೂಲಕ ಉಚಿತ ಅಕ್ಕಿ ಪಡೆಯುತ್ತಿದ್ದಾರೆ. ಅದೇ ರೀತಿ ನಿರುದ್ಯೋಗಿ ಯುವಕ ಯುವತಿಯರು ಯುವನಿಧಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಈ ಭಾರಿ ಮಹೀಳಾ ಪರವಾದ ಯೋಜನೆ ಗಳನ್ನು ಕೂಡ ರಾಜ್ಯ ಸರಕಾರ ಹೆಚ್ಚು ಹಮ್ಮಿಕೊಂಡಿದ್ದು ಅದರಲ್ಲಿ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆ (Shakti Yojana) ಬಗ್ಗೆ ಮಹೀಳೆಯರು ಹೆಚ್ಚು ಸಂತೃಪ್ತಿ ಯಾಗಿದ್ದಾರೆ. ಇದೀಗ ಈ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಮೂಲಕ ನೊಂದಣಿ ಮಾಡಿದ ಮಹೀಳೆಯರಿಗೆ ಎರಡು ಸಾವಿರ ರೂ ಜಮೆಯಾಗುತ್ತಿದೆ. ಇದೀಗ ಆರು ಕಂತಿನ ಹಣ ಬಿಡುಗಡೆ ಯಾಗಿದ್ದು ಏಳನೇ ಕಂತಿನ ಹಣ ಇನ್ನಷ್ಟೆ ಬಿಡುಗಡೆ ಯಾಗಬೇಕಿದೆ.
ಹಣ ಯಾವಾಗ ಖಾತೆಗೆ ಬರಲಿದೆ?
ಈಗಾಗಲೇ ನೊಂದಣಿ ಮಾಡಿದ ಕೆಲವು ಮಹೀಳೆಯರು ಆರು ಕಂತಿನ ಹಣ ಪಡೆದಿದ್ದು ಏಳನೆ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಹೌದು ಈಗಾಗಲೇ ಏಳನೇ ಕಂತಿನ ಹಣವನ್ನುಎಲ್ಲಾ ಫಲಾನುಭವಿಗಳ ಖಾತೆಗೆಜಮೆ ಮಾಡಲು ಸರಕಾರ ಸಿದ್ದತೆಯನ್ನು ಮಾಡಿದ್ದು ಮಾರ್ಚ್ ತಿಂಗಳ 15ರ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ಎಲ್ಲಾ ಜಿಲ್ಲೆಯ ಮಹೀಳೆಯರ ಖಾತೆಗೂ ಈ ಹಣ ಬಿಡುಗಡೆ ಗೊಂಡಿದ್ದು ಶೀಘ್ರದಲ್ಲೇ ಹಣ ಜಮೆ ಯಾಗಲಿದೆ.
ಇಂತವರಿಗೆ ಹಣಜಮೆ ಯಾಗಲ್ಲ:
ಹೆಚ್ಚಿನವರಿಗೆ ಒಂದು ಕಂತಿನ ಗೃಹಲಕ್ಷ್ಮಿ ಹಣ (Gruha Lakshmi Money) ಜಮೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ನೊಂದಣಿ ಮಾಡಿದ ಮಹೀಳೆಯರ ದಾಖಲೆಗಳು ಸರಿ ಇಲ್ಲದೆ ಇರುವ ಕಾರಣ ಹಣ ಜಮೆಯಾಗ್ತ ಇಲ್ಲ ಎನ್ನಲಾಗಿದೆ. ಆಧಾರ್ ಕಾರ್ಡ್ (Aadhaar Card) ಸಿಡಿಂಗ್, ಬ್ಯಾಂಕ್ ಖಾತೆ ನಿಷ್ಕ್ರಿಯ, ರೇಷನ್ ಕಾರ್ಡ್ (Ration Card) ಅಪ್ಡೇಟ್ ಸೇರಿದಂತೆ ಹಲವು ಸಮಸ್ಯೆ ಗಳು ಎದುರಾಗಿದೆ. ಹಾಗಾಗಿ ಒಂದೊಕ್ಕೊಂದು ಮಾಹಿತಿಗಳು ಮ್ಯಾಚ್ ಆಗದೇ ಇರೋ ಕಾರಣ ಗೃಹಲಕ್ಷ್ಮಿ ಯ ಹಣ ಜಮೆಯಾಗಿಲ್ಲ.ಇಂತಹ ದಾಖಲೆಗಳು ಈ ತಿಂಗಳೂ ಕೂಡ ಸಮಸ್ಯೆ ಇದ್ದಲ್ಲಿ ಇಂತವರಿಗೆ ಈ ತಿಂಗಳು ಕೂಡ ಗೃಹಲಕ್ಷ್ಮಿಯ ಹಣ ಜಮೆಯಾಗಲ್ಲ
ಹಣ ಬರುವಂತೆ ಹೀಗೆ ಮಾಡಿ:
ನಿಮಗೆ ಗೃಹಲಕ್ಷ್ಮಿ ಹಣ (Gruha Lakshmi Money) ಜಮೆ ಯಾಗಬೇಕಿದ್ರೆ ನಿಮ್ಮ ದಾಖಲೆಗಳನ್ನು ಮೊದಲು ಸರಿಪಡಿಸಿಕೊಳ್ಳಿ. ಬ್ಯಾಂಕ್ ಖಾತೆಯ ಸಮಸ್ಯೆ ಇದ್ದಲ್ಲಿ ಅಂಚೆ ಕಛೇರಿ ಮೂಲಕ ಹೊಸ ಖಾತೆ ತೆರೆದು ಆ ಖಾತೆಗೆ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸುವ ಮೂಲಕ ಮತ್ತೆ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿ, ಹೀಗೆ ಮಾಡಿದ್ದಲ್ಲಿ ನಿಮಗೆ ಏಳನೆ ಕಂತಿನ ಹಣ ಜಮೆಯಾಗಬಹುದು.