RTC Rules: ತಂದೆ, ತಾಯಿ, ಮುತ್ತಾತನ ಹೆಸರಲ್ಲಿ ಪಹಣಿ(RTC) ಇದ್ದವರಿಗೆ ಗುಡ್ ನ್ಯೂಸ್! ರಾಜ್ಯ ಸರ್ಕಾರದ ಹೊಸ ಘೋಷಣೆ
RTC Transfer: ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ(Krishna Byre Gowda)ರವರು ರಾಜ್ಯದ ಎಲ್ಲ ರೈತರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ, ರಾಜ್ಯದ ರೈತರು ಇಂದಿಗೂ ಕೂಡ ತಮ್ಮ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇರುವಂತಹ ಪಾಹಣಿಯ ಜಮೀನನ್ನು ಉಳಿಮೆ ಮಾಡುತ್ತಿದ್ದಾರೆ ಅಂತಹ ರೈತರು ಬಹಳ ಸುಲಭವಾಗಿ ತಮ್ಮ ಹೆಸರಿಗೆ ಪಾಹಣಿ ಮಾಡಿಸಿಕೊಳ್ಳುವ ಮಾರ್ಗ ಒಂದನ್ನು ಪ್ರಕಟಿಸಿದ್ದಾರೆ.
ನಮ್ಮ ಜಮೀನಿನ ಪಾಹಣಿ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇದ್ದು ಅದನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು(Cadastral Transfer) ಯಾವುದೇ ದಾಖಲೆಗಳು ಇಲ್ಲದೆ ಹೋದರೆ ಅಥವಾ ಅಥವಾ ಆಸ್ತಿಗೆ ಸಂಬಂಧಪಟ್ಟಂತಹ ವ್ಯಕ್ತಿಗಳು ಮರಣ ಹೊಂದಿದ್ದರೆ ಅದನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವುದು ಹೇಗೆ? ಎಂಬ ವಿವರವನ್ನು ತಿಳಿಯಿರಿ.
ರೈತರಿಗೆ ಸರ್ಕಾರದಿಂದ ಬಂಪರ್ ಕೊಡುಗೆ
ಕರ್ನಾಟಕದ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಎಲ್ಲ ರೈತರಿಗೂ ಬಂಪರ್ ಕೊಡುಗೆಯನ್ನು ನೀಡಿದ್ದಾರೆ. ರೈತರ ಜಮೀನಿನ ಆಸು ಪಾಸು ಇರುವ ರಸ್ತೆ, ನೀರು ಹೋಗುವ ಕಾವಲು, ಹಳ್ಳ, ಬೇಲಿ ಮತ್ತು ಜಮೀನಿನಲ್ಲಿ ಇರುವಂತಹ ಮರಗಳು ನನ್ನ ಜಮೀನಿಗೆ ಬರುತ್ತದೆ ಇದು ನನ್ನ ಪಾಲು ಎಂದು ಹಲವು ಬಾರಿ ರೈತರು ಜಗಳಕ್ಕೆ ಇಳಿಯುವ ಪ್ರಕರಣಗಳು ದಾಖಲಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರು ರಾಜ್ಯದಾದ್ಯಂತ ಇರುವ ಎಲ್ಲಾ ರೈತರ ಜಮೀನಿನ ದಾಖಲೆ ಪತ್ರ(Land Document Certificate) ಗಳನ್ನು ಡಿಜಿಟಲೀಕರಣ ಮಾಡಲು ಮುಂದಾಗಿದ್ದಾರೆ.
ಜಮೀನಿನ ಪಾಹಣಿ ಇನ್ಮುಂದೆ ಡಿಜಿಟಲ್ ರೂಪದಲ್ಲಿ
ಜಮೀನು ದಾನದ ರೀತಿ, ಕ್ರಯದ ರೀತಿ, ವಿಭಾಗ ರೂಪದಲ್ಲಿ ಪಿತ್ರಾರ್ಜಿತ ಅಥವಾ ಪೌತಿ ಖಾತೆಯ ರೂಪದಲ್ಲಿ ಒಂದು ರೈತನಿಂದ ಮತ್ತೊಂದು ರೈತನಿಗೆ ಆಸ್ತಿಯ ಬದಲಾವಣೆ ಉಂಟಾಗಿರುತ್ತದೆ. ಹಿಂದೆಲ್ಲ ಈ ಎಲ್ಲಾ ಮಾಹಿತಿಯನ್ನು ಕಾಗದ ರೂಪದಲ್ಲಿ ಇರಿಸಿಕೊಳ್ಳುತ್ತಿದ್ದರು ಆದರೆ ಅದರಲ್ಲಿ ಸರಿಯಾಗಿ ಯಾರಿಗೆ ಎಷ್ಟು ಭಾಗದ ಜಮೀನು ಸೇರ್ಪಡೆಯಾಗುತ್ತದೆ ಎಂಬುದನ್ನು ನಮೂದಿಸುತ್ತಿರಲಿಲ್ಲ. ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಿಂದ ರಾಜ್ಯ ಸರ್ಕಾರ ಪಾಹಣಿಯನ್ನು ಡಿಜಿಟಲೀಕರಣ(Cadastral Digitalization) ಮಾಡಲು ಮುಂದಾಗಿದ್ದಾರೆ.
ಈ ದಾಖಲಾತಿಯನ್ನು ನೀಡಿ ಸುಲಭವಾಗಿ ಪಹಣಿ ವರ್ಗಾವಣೆ ಮಾಡಿಕೊಳ್ಳಿ!
ಜಮೀನಿನ ಮಾಲೀಕರು ತಮ್ಮ ಜಮೀನಿನ ಕುರಿತಾದ ಎಲ್ಲಾ ಮಾಹಿತಿಯನ್ನು ಮೊಬೈಲ್ ನಲ್ಲಿ ತಿಳಿಯಬಹುದಾದಂತಹ ಸೇವೆಯನ್ನು ರಾಜ್ಯ ಸರ್ಕಾರ ರೈತರಿಗೆ ಒದಗಿಸಿ ಕೊಡುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ರೈತರ ಜಮೀನಿನ ಮಾಹಿತಿಯನ್ನು ಹಾಗೂ ಅಳತೆಯನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ(Digital Form) ಸಂಗ್ರಹಿಸಿಡಲು ಯೋಜನೆ ರೂಪಿಸುತ್ತಿದ್ದಾರೆ ಹಾಗೂ ಈ ಪ್ರಕ್ರಿಯೆಯನ್ನು 2024ರ ಒಳಗೆ ಪೂರ್ಣಗೊಳಿಸುವ ಉದ್ದೇಶವನ್ನು ಕಂದಾಯ ಇಲಾಖೆ ಹೊಂದಿದೆ.
ಇನ್ಮುಂದೆ ರಾಜ್ಯದ ಎಲ್ಲಾ ರೈತರ ಜಮೀನಿನ ಮಾಹಿತಿ ಡಿಜಿಟಲ್ ರೂಪದಲ್ಲಿ ಲಭ್ಯವಿರಲಿದೆ. ರಾಜ್ಯದ ಹಲವು ಕಡೆಗಳಲ್ಲಿ ಈ ಕಾರ್ಯ ಜಾರಿಗೆ ಬಂದಿದ್ದು ಡಿಜಿಟಲ್ ರೂಪದಲ್ಲಿ ರೈತರ ಜಮೀನನ್ನು ಸ್ಕ್ಯಾನ್ ಮಾಡಿ ಅದರ ದಾಖಲೆ ಸಂಗ್ರಹಣೆ(Document Collection) ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ರೈತರು ತಮ್ಮ ಮೊಬೈಲ್ಗಳಲ್ಲಿಯೇ ಜಮೀನಿನ ಕುರಿತಾದ ಎಲ್ಲಾ ವಿವರವನ್ನು ತಿಳಿಯಬಹುದು ಹಾಗೂ ಪಾಹಣಿ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿದ್ದು, ಅವರು ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರವನ್ನು ಒದಗಿಸಿ ಸುಲಭವಾಗಿ ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು.