Anna Bhagya Money: ಈ ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆಯ ಹೆಸರು ಇದ್ದರೆ ಅಕ್ಕಿಹಣ ಈ ತಿಂಗಳು ಜಮಾ
ರಾಜ್ಯ ಸರಕಾರವು ಚುನಾವಣೆ ಮೊದಲು ಅನ್ನಭಾಗ್ಯ ಯೋಜನೆ (Anna Bhagya Yojana) ಯಡಿ ಹತ್ತು ಕೆಜಿ ಅಕ್ಕಿ ನೀಡುವ ಭರವಸೆ ನೀಡಿದ್ದು ಆದರೆ, ಅಕ್ಕಿ ಕೊರತೆಯಿಂದಾಗಿ 5 ಕೆಜಿ ಅಕ್ಕಿ ನೀಡುತ್ತಿದ್ದು, ಇನ್ನುಳಿದ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈಗ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ನೀಡುತ್ತಿದೆ. ರಾಜ್ಯ ಸರಕಾರದ ಮುಖ್ಯ ಯೋಜನೆಯಲ್ಲಿ ಈ ಯೋಜನೆ ಕೂಡ ಒಂದಾಗಿದ್ದು ಬಡವರ್ಗದ ಕೆಳಗಿರುವ ಜನತೆಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಬಡ ವರ್ಗದ ಜನತೆಗೆ ಈ ಸೌಲಭ್ಯ ನೇರವಾಗುತ್ತಿದೆ.
ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ಜಮೆ:
ಕೇಂದ್ರ ಸಕಾರ ಅಕ್ಕಿಯನ್ನು ನೀಡಲು ಒಪ್ಪದಿದ್ದಾಗ ಇತರ ರಾಜ್ಯಗಳಿಂದ ಅಕ್ಕಿಯನ್ನು ಖರೀದಿಸಲು ಸಾಧ್ಯ ವಾಗದೇ ಇರುವುದರಿಂದ ಅಕ್ಕಿ ಸಿಗುವರೆಗೂ ಹಣವನ್ನು ನೀಡುವುದನ್ನು ಮುಂದುವರಿಸಿದಾಗಿ ಸರಕಾರ ತಿರ್ಮಾನ ಮಾಡಿತ್ತು. ಅದೇ ರೀತಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ದಾಖಲೆ ಗಳು ಸರಿ ಇದ್ದ ನೊಂದಣಿ ಮಾಡಿದ ಪ್ರತಿಯೊಬ್ಬರಿಗೂ ಹಣ (Anna Bhagya Money) ಜಮೆ ಯಾಗುತ್ತಿದೆ.
ಈ ಜಿಲ್ಲೆಗಳಿಗೆ ಅಕ್ಕಿ ಹಣ ಮೊದಲು ಜಮೆ:
ಬೆಳಗಾವಿ, ಕಲಬುರಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ,ಧಾರವಾಡ, ಬಾಗಲಕೋಟೆ,ಹಾವೇರಿ, ಚಿತ್ರದುರ್ಗ ಇಷ್ಟು ಜಿಲ್ಲೆ ಗಳಿಗೆ ಪೆಬ್ರವರಿ ತಿಂಗಳ ಹಣ ಮೊದಲು ಬಿಡುಗಡೆಯಾಗಲಿದೆ. ಈಗಾಗಲೇ ಐದುತಿಂಗಳ ಅಕ್ಕಿ ಹಣ ಬಿಡುಗಡೆಯಾಗಿದ್ದು ಆರನೇ ಮತ್ತು ಏಳನೇ ತಿಂಗಳ ಹಣ (Anna Bhagya Money) ಇನ್ನಷ್ಟೆ ಜಮೆಯಾಗಬೇಕಿದೆ. ಒಟ್ಟಿನಲ್ಲಿ ಈ ತಿಂಗಳ ಒಳಗೆ ಎಲ್ಲ ಜಿಲ್ಲೆಯ ಫಲಾನುಭವಿಗಳಿಗೂ ಅಕ್ಕಿಯ ಹಣ ಬಿಡುಗಡೆ ಗೊಳ್ಳಲಿದೆ.
ಆಹಾರ ಧಾನ್ಯ ವಿತರಣೆ?
ಇನ್ನೂ ಸರರ್ಕಾರ ಅಕ್ಕಿಗೆ ಬದಲಾಗಿ ಇತರ ಆಹಾರ ಧಾನ್ಯಗಳ ವಿತರಣೆಯ ಬಗ್ಗೆಯು ಪರಿಶೀಲನೆ ಮಾಡುತ್ತಿದ್ದು ಬೇಳೆ, ರಾಗಿ, ಜೋಳ, ಕೊಡಬಹುದೇ ಎಂದು ಆಹಾರ ಇಲಾಖೆಯ ಸಚಿವರೊಂದಿಗೆ ಚರ್ಚೆಯು ನಡೆಯುತ್ತಿದೆ.
ಹಣ ಬಾರದೇ ಇದ್ದಲ್ಲಿ ಹೀಗೆ ಮಾಡಿ:
ಬಿಪಿಎಲ್ ಕುಟುಂಬದ ಮುಖ್ಯಸ್ಥನ ಆಧಾರ್ ಸಂಖ್ಯೆ ಲಿಂಕ್ ಆಗದೇ ಇರುವುದರಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅಕ್ಕಿ ಹಣ ಜಮೆಯಾಗುತ್ತಿಲ್ಲ. ಹಾಗಾಗಿ ಮೊದಲಿಗೆ ಈ ಕೆಲಸ ಮಾಡಿಸಿ, ಅದೇ ರೀತಿ ರೇಷನ್ ಕಾರ್ಡ್ ಅಪ್ಡೇಟ್ ಮಾಡಿದ್ದಲ್ಲಿ ಮತ್ತೆ ಆಧಾರ್ ಲಿಂಕ್ ಮಾಡಿಸುವ ಮೂಲಕ ನಿಮ್ಮ ದಾಖಲೆ ಸರಿಪಡಿಸಿ.