Loan Recovery: ಬ್ಯಾಂಕ್ ಸಾಲ ಕಟ್ಟಲು ಹಣವೇ ಇರದಿದ್ದವರಿಗೆ ಸಿಹಿಸುದ್ದಿ! ಕೋರ್ಟ್ ಧಿಡೀರ್ ಹೊಸ ಆದೇಶ
Loan Recovery: ಸಾಕಷ್ಟು ಬ್ಯಾಂಕ್ ಗಳು ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳು ಸಾಲವನ್ನು ನೀಡಿ ಅದನ್ನು ಮರುಪಾವತಿ ಮಾಡಲಾಗದ ಸಾಲಗಾರರ ಮೇಲೆ ತಮ್ಮ ಏಜೆಂಟ್ ಗಳನ್ನು ಕಳುಹಿಸಿ ಬಲವಂತವಾಗಿ ಹಣವನ್ನು ವಸೂಲಿ ಮಾಡಲಾಗುತ್ತಿತ್ತು. ಇದರ ಕುರಿತು ಗಮನಹರಿಸಿರುವಂತಹ ಮದ್ರಾಸ್ ಹೈಕೋರ್ಟ್(Madras High court) ಈ ಕುರಿತು ಗಂಭೀರವಾದ ತನಿಖೆ ನಡೆಸಿ ಆದೇಶ ಒಂದನ್ನು ಹೊರಡಿಸಿದೆ.
ಅಷ್ಟಕ್ಕೂ ಮದ್ರಾಸ್ ಹೈಕೋರ್ಟ್ ನೀಡಿರುವಂತಹ ಆದೇಶವೇನು? ಹಣ ವಸೂಲಿ ಮಾಡಲು ಬೇರೆ ಮಾರ್ಗಸೂಚಿಯನ್ನೆನಾದರೂ ಬಿಡುಗಡೆ ಮಾಡಿದ್ದಾರಾ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ಶುಕ್ರವಾರ ನಡೆದಂತಹ ಸಭೆಯಲ್ಲಿ ಮುಖ್ಯ ನಾರಾಯಣ ಮೂರ್ತಿಗಳಾದ ಎಸ್ ಪಿ ಗಂಗಾಪುರವಾಲ ಮತ್ತು ನಾರಾಯಣಪೂರ್ತಿ ಪಿಡಿ ಆದಿಕೇಶವಲು ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(RBI) ಅರ್ಜಿಯನ್ನು ಸಲ್ಲಿಕೆ ಮಾಡಿ ಎಲ್ಲಾ ಬ್ಯಾಂಕ್ ಗಳಿಗೂ ಹಾಗೂ ಅದರ ಏಜೆಂಟ್ಗಳಿಗೂ ವಿಸ್ತಾರವದಂತಹ ಮಾರ್ಗಸೂಚಿಯನ್ನು ಪ್ರಕಟ ಮಾಡಿದ್ದಾರೆ.
ಅದರ ಅನ್ವಯ, ಬ್ಯಾಂಕ್ ಗಳು ಬಾಕಿ ಇರುವಂತಹ ಸಾಲದ ಮೊತ್ತವನ್ನು ಹಿಂಪಡೆಯಬೇಕಾದರೆ ಕಾನೂನು ಬದ್ಧವಾಗಿದೆ ನಡೆದುಕೊಳ್ಳಬೇಕು ಯಾವುದೇ ಕಾರಣಕ್ಕೂ ತೋಳ್ಬಳದ ಪ್ರದರ್ಶನವನ್ನು ಸಾಲಗಾರರ ಮೇಲೆ ಮಾಡಿ ಖಾಸಗಿ ಏಜೆಂಟ್(Private Agents) ಗಳ ಮೂಲಕ ಹಣ ವಸೂಲಿ ಮಾಡಿಸುವಂತಹ ಕೆಲಸವನ್ನು ಮಾಡುವ ಹಾಗಿಲ್ಲ.
ಇನ್ನು ಬಲವಂತವಾಗಿ ಸಾಲಗಾರರಿಂದ ಹಣವನ್ನು ವಾಪಸ್ ನೀಡುವಂತೆ, ಹಿಂಸೆ ನೀಡುವ ಹಾಗಿಲ್ಲ ಎಂಬ ಆದೇಶವನ್ನು ಹೊರಡಿಸಿದ್ದಾರೆ. ಹೌದು ಗೆಳೆಯರೇ ಕೆಲವು ದಿನಗಳ ಹಿಂದೆ ರೈತರಿಗೆ ನೀಡಿ ನೀಡಿರುವ ಸಾಲವನ್ನು ಹಿಂಪಡೆಯಲು ಬ್ಯಾಂಕ್ ನವರು ಖಾಸಗಿ ಏಜೆಂಟ್ ಗಳನ್ನು ಕಳುಹಿಸಿ ತಮ್ಮ ತೋಳ್ಬಲದ ಪ್ರದರ್ಶನವನ್ನು ಮಾಡಿ ಬಹಳ ಬಲವಂತವಾಗಿ ಹಣ ವಸೂಲಿ ಮಾಡಿರುವಂತಹ ಘಟನೆ ಒಂದರ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ಗೆ ವಕೀಲರಾದಂತಹ ಶ್ರೀ ಮೋಹನ್(Advocate Sri Mohan) ಅವರು ಸಲ್ಲಿಸಿದರು.
ಸಾರ್ವಜನಿಕ ಹಿತಾಸಕ್ತಿಯ ವಿಲೇವಾರಿ ಮಾಡಿರುವಂತಹ ನ್ಯಾಯಾಧೀಶರು ತಮ್ಮ ಪೀಠದಲ್ಲಿ ಕುಳಿತು ‘ ಏಜೆಂಟ್ಗಳು ಯಾವುದೇ ಕಾರಣಕ್ಕೂ ತೋಳ್ಬಲವನ್ನು ಬಳಸಿ ದಬ್ಬಾಳಿಕೆಯಿಂದ ಕೃಷಿಕರ ಬಳಿ ಸಾಲವನ್ನು ಹಿಂಪಡೆಯುವಂತಿಲ್ಲ, ಎಂಬ ಆದೇಶ ಹೊರಡಿಸುವುದರ ಜೊತೆಗೆ ನ್ಯಾಯಯುತ ಆಚರಣೆಗಳ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಮಾರ್ಗಸೂಚಿಯ ಅನ್ವಯ ಬ್ಯಾಂಕ್ ಗಳು ಸಾಲಗಾರನಿಗೆ ಹಣವನ್ನು ಹಿಂಪಡೆಯಲು ಬರುತ್ತಿರುವ ಏಜೆನ್ಸಿಯ ವಿವರವನ್ನು ತಿಳಿಸಬೇಕು ಏಜೆನ್ಸಿ ಗುರುತಿನ ಚೀಟಿಗಳನ್ನು ನೀಡಬೇಕು.
ಮತ್ತು ಮರುಪ್ರಾಪ್ತಿ ಪ್ರಕ್ರಿಯೆಯಲ್ಲಿ ಸಾಲಗಾರನಿಗೆ ತೋರಿಸಬೇಕಾದ ಅಧಿಕಾರ ಪತ್ರವನ್ನು ನೀಡಬೇಕು, ಅಧಿಕಾರ ಪತ್ರವು ಕಡ್ಡಾಯವಾಗಿ ರಿಕವೆರಿ ಏಜೆನ್ಸಿ ಅವರ ದೂರವಾಣಿ ಸಂಖ್ಯೆಯನ್ನು ಹೊಂದಿರಬೇಕು. ಹೈ ಕೋರ್ಟ್ (High court) ಆದೇಶಿಸಿದ ನಂತರ ಯಾರು, ಈ ಮಾರ್ಗ ಸೂಚಿಗಳನ್ನು ಅನುಸರಿಸುವುದಿಲ್ಲವೋ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಹಾಗೂ ಬ್ಯಾಂಕಿನ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದೆ. ಈ ಆದೇಶ ಎಲ್ಲಾ ರಾಜ್ಯಕ್ಕೂ ಕೂಡ ಅನ್ವಯಿಸಲಿದೆ ಎನ್ನಲಾಗಿದೆ.