Gruha Lakshmi: ಈಗಾಗಲೇ ಗೃಹಲಕ್ಷ್ಮಿ ಹಣ ಬಂದಿರುವವರಿಗೆ ಹಾಗೂ ಬಾರದೆ ಇದ್ದವರಿಗೆ ಹೊಸ ಸೂಚನೆ! ಧಿಡೀರ್ ಆದೇಶ
ಕರ್ನಾಟಕ ಸರ್ಕಾರ ಮಹಿಳೆಯರಿಗೆ ಎಂದು ಗೃಹಲಕ್ಷ್ಮಿ(Gruha Lakshmi) ಯೋಜನೆ ಜಾರಿ ಮಾಡಿತ್ತು. ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯ ಮೂಲಕ ಹಲವಾರು ಜನ ಲಾಭವನ್ನು ಪಡೆಯುತ್ತಿದ್ದಾರೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು ಪಡೆಯಲು ಗೃಹಿಣಿಯರು ಕಾಯುತ್ತಿದ್ದಾರೆ. ಇನ್ನು ಈ ಯೋಜನೆಯ ಮೂಲಕ ಸರ್ಕಾರವು ಗೃಹಿಣಿಯರಿಗೆ ಆರ್ಥಿಕ ಸಬಲತೆಯನ್ನು ಒದಗಿಸುವಂತಹ ಕಾರ್ಯವನ್ನು ಮಾಡಲು ಮುಂದಾಗಿತ್ತು. ಇನ್ನು ಈ ಯೋಜನೆಯಲ್ಲಿ ಸರಿಯಾಗಿ ದಾಖಲಾತಿ ನೀಡದೆ ಇದ್ದವರು ದಾಖಲಾತಿ ನೀಡುವಂತೆ ಮತ್ತು ದಾಖಲೆಗಳನ್ನು ಅಪ್ಡೇಟ್ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು.
Gruha Lakshmi ಯೋಜನೆಯಲ್ಲಿ ದೊಡ್ಡ ವಂಚನೆ!
ಇನ್ನು ದಾಖಲೆಗಳನ್ನು ಅಪ್ಡೇಟ್ ಮಾಡಿಸಿಕೊಂಡು ಅಪ್ಲೋಡ್ ಮಾಡಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆಯಲು ಸರ್ಕಾರ ಈ ಆದೇಶವನ್ನು ನೀಡಿತು. ಆದರೆ ಕೆಲವೊಬ್ಬರು ಸುಳ್ಳು ಸುದ್ದಿ ಹೇಳಿ ಗೃಹಲಕ್ಷ್ಮಿ ಯೋಜನೆಯೇ ಅಪ್ಡೇಟ್ ಮಾಡಬೇಕು? ಎಂಬ ಸುದ್ದಿಯನ್ನು ಹಬ್ಬಿಸಿ ಅದರ ಮೂಲಕವಾಗಿ ಹಣವನ್ನು ದೋಚುವ ಕೆಲಸ ಮಾಡುತ್ತಿದ್ದಾರೆ. ಅಂದರೆ ಅಪ್ಲಿಕೇಶನ್ ಅಪ್ಡೇಟ್ ಎಂದು ಹಣವನ್ನು ತೆಗೆದುಕೊಂಡು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತೇವೆ? ಎಂದು ಹೇಳಿ ಅದರಲ್ಲಿ ಇರುವಂತಹ ಮಾಹಿತಿಯನ್ನು ತೆಗೆದುಕೊಂಡು ಗೃಹಲಕ್ಷ್ಮಿ ಯೋಜನೆಗೆ ಬರುತ್ತಿರುವಂತಹ ಹಣವನ್ನು ಅವರ ಖಾತೆಗೆ ಟ್ರಾನ್ಸ್ಫರ್ ಮಾಡಿಕೊಳ್ಳುವಂತಹ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ.
ಇನ್ನು ಕೆಲವರು ನಾವು ಸರ್ಕಾರಿ ಅಧಿಕಾರಿಗಳು ಮತ್ತು ಬ್ಯಾಂಕಿನ ಸಿಬ್ಬಂದಿ ಎಂದು ಹೇಳಿ ಗೃಹಿಣೀಯರ ನಂಬರ್ ಗಳನ್ನು ತೆಗೆದುಕೊಂಡು ಕರೆ ಮಾಡಿ ಗೃಹಲಕ್ಷ್ಮಿ ಯೋಜನೆಯಿಂದ ಪ್ರಯೋಜನವಾಗುತ್ತಿದೆಯೇ ಎಂಬಂತೆ ಮಾತನಾಡಿ, ಸರ್ಕಾರದಿಂದ ಕರೆ ಮಾಡುತ್ತಿದ್ದೇವೆ ಎಂಬುದಾಗಿ ಹೇಳಿ, ಅವರಿಂದ ಓಟಿಪಿ ಪಡೆದು ಅವರ ಅಕೌಂಟನಲ್ಲಿ ಇರುವಂತಹ ಹಣವನ್ನು ದೋಚುತಿದ್ದಾರೆ. ಈ ಎರಡು ರೀತಿಯಾಗಿ ಹಣವನ್ನು ದೋಚಲು ಹಲವರು ಮುಂದಾಗಿದ್ದಾರೆ.
ಇದರಿಂದ ದೂರ ಉಳಿಯಲು ಮಾಡಬೇಕಾಗಿರುವಂತಹ ಕ್ರಮ ಏನೆಂದರೆ?
ಯಾವುದೇ ರೀತಿಯಾದಂತಹ ಅಪ್ಡೇಟ್ ಮಾಡಿಸಬೇಕಾದರೆ ಬರಿ ದಾಖಲೆಗಳನ್ನು ಮಾತ್ರ ಅಪ್ಡೇಟ್ ಮಾಡಿಸಬೇಕು, ಇನ್ನು ಗೃಹಲಕ್ಷ್ಮಿ ಯೋಜನೆಯನ್ನೇ ಅಪ್ಡೇಟ್ ಮಾಡಬೇಕು ಎಂಬ ಯಾವುದೇ ರೀತಿಯಾದಂತಹ ಆದೇಶವನ್ನು ಸರ್ಕಾರವು ನೀಡಿಲ್ಲ. ಆದ್ದರಿಂದ ಮಾಹಿತಿಯನ್ನು ನೀಡದೆ ಇರುವುದು ಬಹಳ ಉತ್ತಮವಾದಂತಹ ವಿಷಯ. ಇನ್ನು ಇದರ ಜೊತೆಗೆ ಯಾವುದೇ ರೀತಿಯಾದಂತಹ ಕರೆ ಬಂದಾಗ, ಸರ್ಕಾರವು ಯಾವುದೇ ರೀತಿಯಾದಂತಹ ಕರೆ ಮಾಡುವಂತೆ ಆದೇಶ ನೀಡಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಓಟಿಪಿ ಅಥವಾ ಯಾವುದೇ ದಾಖಲೆಗಳ ಬಗ್ಗೆ ಮಾಹಿತಿಯನ್ನು ನೀಡದೆ ಇದ್ದಲ್ಲಿ ಈ ಎರಡು ರೀತಿಯ ಹಣದೋಚುವವರಿಂದ ಸುರಕ್ಷಿತವಾಗಿರಬಹುದು.