Gruha Lakshmi Money: ಈ ಹತ್ತು ಜಿಲ್ಲೆಗಳಿಗೆ ಏಳನೇ ಕಂತಿನ ಗೃಹಲಕ್ಷ್ಮಿ ಹಣ ಜಮೆ
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾದ ಯೋಜನೆ ಗೃಹಲಕ್ಷ್ಮಿ (Gruha Lakshmi) ಕೂಡ ಒಂದಾಗಿದ್ದು ಮಹೀಳಾ ಪರವಾದ ಯೋಜನೆ ಇದಾಗಿದೆ. ಈವರೆಗೂ ಒಂದು ಕೋಟಿಗೂ ಅಧಿಕ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಆರ್ಥಿಕ ನೆರವು ಸಿಗುತ್ತಿದ್ದು ಮನೆಯ ಯಜಮಾನಿ, ಹಿರಿಯ ಮಹೀಳೆಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುವ ಯೋಜನೆಯು ಇದಾಗಿದೆ. ಇಲ್ಲಿಯವರೆಗೆ ಆರು ಕಂತಿನ ಹಣ ಕೆಲವು ಮಹೀಳೆಯರ ಖಾತೆಗೆ ಜಮೆಯಾಗಿದ್ದು ಏಳನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂದು ಹೆಚ್ಚಿನ ಮಹೀಳೆಯರು ಕಾತುರದಲ್ಲಿ ಇದ್ದಾರೆ.
ಈ ಜಿಲ್ಲೆಗಳಿಗೆ ಮೊದಲು ಹಣ ಬಿಡುಗಡೆ:
ಸರಕಾರವು ಎಲ್ಲ ಜಿಲ್ಲೆಗಳಿಗೆ ಏಳನೇ ಕಂತಿನ ಹಣ ಬಿಡುಗಡೆ ಮಾಡಿದ್ದು ಕೆಲವು ಜಿಲ್ಲೆಯ ಮಹೀಳೆಯರಿಗೆ ಈಗಾಗಲೇ ಹಣ ಬಿಡುಗಡೆ ಗೊಂಡಿದ್ದು ಮೊದಲಿಗೆ ಬೆಳಗಾವಿ, ಕಲಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ, ಧಾರವಾಡ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಚಿತ್ರದುರ್, ಯಾದಗಿರಿ ಇಷ್ಟು ಜಿಲ್ಲೆಗಳಿಗೆ ಏಳನೇ ಕಂತಿನ ಹಣ ಮೊದಲು ಬಿಡುಗಡೆ ಯಾಗಲಿದೆ.
ಯಾವಾಗ ಈ ಹಣ ಬಿಡುಗಡೆ?
ಈಗಾಗಲೇ ಸರಕಾರ ಈ ಹಣ ಬಿಡುಗಡೆ ಮಾಡಿದ್ದು ಹಂತ ಹಂತವಾಗಿ ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆಯಾಗಲಿದೆ.ಅರ್ಜಿ ಸಲ್ಲಿಕೆ ಪ್ರಕ್ರಿಯೇ ಸರಿ ಇದ್ದಲ್ಲಿ ಇದೇ ತಿಂಗಳ ಇಪ್ಪತ್ತರ ಒಳಗೆ ಎಲ್ಲ ರಾಜ್ಯಸ ಮಹೀಳೆಯರಿಗೆ ಈ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಲಿದೆ ಎಂದು ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಪಷ್ಟನೆ ಯನ್ನು ನೀಡಿದ್ದಾರೆ.
ಹಣ ಬಾರದೇ ಇದ್ದಲ್ಲಿ ಹೀಗೆ ಮಾಡಿ:
ನಿಮಗೆ ಒಂದು ಕಂತಿನ ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆಯಾಗಿಲ್ಲ ಎಂದಾದರೆ ಮೊದಲಿಗೆ ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರ ಕ್ಕೆ ಭೇಟಿ ನೀಡುವ ಮೂಲಕ ದಾಖಲೆ ಗಳಲ್ಲಿ ಏನು ಸಮಸ್ಯೆ ಎಂಬುದನ್ನು ತಿಳಿದುಕೊಳ್ಳಿ. ದಾಖಲೆ ಸರಿಪಡಿಸಿ ಈ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸುವ ಮೂಲಕ ನೀವು ಈ ಸೌಲಭ್ಯ ದ ಸದುಪಯೋಗ ಮಾಡಬಹುದಾಗಿದೆ.
ಒಟ್ಟಿನಲ್ಲಿ ಈ ಯೋಜನೆಯ ಸೌಲಭ್ಯ ನೊಂದಣಿ ಮಾಡಿದ ಪ್ರತಿ ಮಹೀಳೆಯರಿಗೂ ದೊರೆಯಲು ಸರಕಾರ ಹಲವು ರೀತಿಯ ಕ್ರಮ ಗಳನ್ನು ಆಯೋಜನೆ ಮಾಡಿದ್ದು ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ಕೂಡ ನೀಡಿದೆ.