KSRTC: ದೇಶಾದ್ಯಂತ ಎಲ್ಲಾ ಸರ್ಕಾರೀ ಬಸ್ ಡ್ರೈವರ್ ಗಳಿಗೆ ಹೊಸ ರೂಲ್ಸ್! ಕರ್ನಾಟಕಕ್ಕೂ ಬರುತ್ತಾ ಈ ನಿಯಮ
UP Bus Drivers Asked To Keep Family Photo On Dashboard: ರಸ್ತೆ ಅಪಘಾತದಲ್ಲಿ ಸಾಯುವವರ ಪ್ರಮಾಣ ಅಧಿಕವಾಗುತ್ತಲೆ ಇದೆ ಇದನ್ನು ತಡೆಗಟ್ಟುವ ಸಲುವಾಗಿ ಸರಕಾರ ಅನೇಕ ನಿಯಮ ಜಾರಿ ತಂದರೂ ವಾಹನ ಚಲಾಯಿಸುವಾಗ ಕೆಲವೊಮ್ಮೆ ನಾವು ತೋರುವ ನಿರ್ಲಕ್ಷವೇ ಅಪಘಾತಕ್ಕೆ ಮೂಲ ಕಾರಣ ಆಗುವ ಸಾಧ್ಯತೆ ಕೂಡ ಇದೆ. ರಸ್ತೆ ಅಪಘಾತ ಪ್ರಮಾಣ ಕಡಿಮೆ ಮಾಡಲು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಕಾರ್ಯಕ್ರಮ ಪರಿಚಯಿಸುತ್ತಲಿದೆ. ಈಗ ಉತ್ತರ ಪ್ರದೇಶದ ಸರಕಾರವು ಅಲ್ಲಿನ ಜನತೆಯ ಅಪಘಾತ ಮಟ್ಟ ಕಡಿಮೆ ಮಾಡುವ ಸಲುವಾಗಿ ಹೊಸ ಆದೇಶ ನೀಡಿದ್ದು ಅದು ಇತರ ರಾಜ್ಯಕ್ಕೂ ಮಾರ್ಗದರ್ಶಿಯಂತಿದೆ.
ಅಪಘಾತ ತಡೆಯಬೇಕು ಎಂದು ಲಕ್ನೋ ಸರಕಾರ ಪ್ರಯತ್ನ ಪಡುತ್ತಲಿದೆ. ಅದೇ ರೀತಿ ಮೊದಲ ಹಂತದಲ್ಲಿ ಸಾರಿಗೆ ಇಲಾಖೆಯ ಬಸ್ ಗಳಿಗೆ ಅಪಘಾತ ಒಳಗಾಗುವುದನ್ನು ತಡೆಯುವ ಸಲುವಾಗಿ ವಿನೂತನ ಕಾರ್ಯಕ್ರಮ ಒಂದನ್ನು ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆ. ಆ ಹೊಸ ಕ್ರಮ ಏನು ಯಾರಿಗೆ ಇದು ಅನುಕೂಲ ಆಗಿರಲಿದೆ ಇದನ್ನು ಇಡೀ ದೇಶವ್ಯಾಪಿ ಯಾಕೆ ಜಾರಿಗೆ ತರಬೇಕು ಎಂಬುದನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.
ಕುಟುಂಬದ ಫೋಟೋ
ಸಾರಿಗೆ ಬಸ್ ನ ಚಾಲಕರು ಇನ್ನು ಮುಂದೆ ತಮ್ಮ ಬಸ್ ನ ಡ್ಯಾಶ್ ಬೋರ್ಡ್ ಮುಂಭಾಗದಲ್ಲಿ ತಮ್ಮ ಕುಟುಂಬದ ಫೋಟೋವನ್ನು ಕಡ್ಡಾಯವಾಗಿ ಅಂಟಿಸಬೇಕು ಎಂಬ ನಿಯಮ ಇದೆ. ಅದರ ಪ್ರಕಾರ ಕುಟುಂಬದ ಫೋಟೋ ಅಂಟಿಸಿದರೆ ಅದೊಂದು ರೀತಿ ಭಾವನಾತ್ಮಕ ಕನೆಕ್ಟ್ ಆಗಲಿದ್ದು ಪ್ರಯಾಣಿಸುವಾಗ ಜಾಗೃತೆ ವಹಿಸುತ್ತಾರೆ ಎಂಬ ನಿಲುವು ಇರುವುದನ್ನು ಕಾಣಬಹುದು. ಇದರೊಂದಿಗೆ ರಸ್ತೆ ಸುರಕ್ಷತಾ ನಿಯಮ ಕೂಡ ಪಾಲನೆ ಆಗಲಿದೆ.
ಆದೇಶ
ಈ ಬಗ್ಗೆ ಉತ್ತರ ಪ್ರದೇಶದ ಸರಕಾರದ ಸಾರಿಗೆ ಇಲಾಖೆಯ ಕಮಿಷನರ್ ಚಂದ್ರ ಭೂಷಣ್ ಸಿಂಗ್ ಅವರು ಈ ಬಗ್ಗೆ ಸರಕಾರದ ಮುಖೇನ ಅಧಿಕೃತ ಆದೇಶ ನೀಡಿದ್ದಾರೆ. ಈ ಆದೇಶದಲ್ಲಿ ಸರಕಾರಿ ಸಾರಿಗೆ ವಾಹನ ಚಾಲಕರು ಮಾತ್ರವಲ್ಲದೆ ಖಾಸಗಿ ವಾಹನ, ಬಸ್ ಚಾಲಕರಿಗೂ ತಮ್ಮ ವಾಹನದ ಡ್ಯಾಶ್ ಬೋರ್ಡ್ ಮೇಲೆ ಕುಟುಂಬದ ಫೋಟೋ ಅಂಟಿಸುವಂತೆ ತಿಳಿಸಿದೆ. ಹಾಗಾಗಿ ಈ ನಿಯಮ ಎಲ್ಲೆಡೆ ಜಾರಿಯಾಗಲಿದ್ದು ಇದು ಯಶಸ್ವಿ ಆದರೆ ಇತರ ರಾಜ್ಯಕ್ಕೂ ಇದೇ ನಿಯಮ ಬರಲಿದೆ.
ಅಪಘಾತ ಮಟ್ಟ ತಗ್ಗಲಿದೆ
ಈ ನಿಯಮ ಜಾರಿಯಾಗುವಾಗ ವಾಹನ ಚಲಾಯಿಸುವ ಚಾಲಕರು ರಸ್ತೆ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲನೆ ಮಾಡಿತ್ತಾರೆ ಆಗ ಅಪಘಾತ ಪ್ರಮಾಣ ಕೂಡ ತಗ್ಗಲಿದೆ. ಈ ಹಿಂದೆ ಆಂಧ್ರ ಪ್ರದೇಶದಲ್ಲಿ ಇದೇ ಮಾದರಿ ಪ್ರಯೋಗ ಮಾಡಿ ಅಲ್ಲಿ ಸಾರಿಗೆ ಬಸ್ ಅಪಘಾತಕ್ಕೆ ಒಳಗಾಗುವ ಪ್ರಮಾಣ ಕಡಿಮೆ ಆಗಿದೆ ಹಾಗಾಗಿ ಉತ್ತರ ಪ್ರದೇಶ ಇದೇ ಮಾದರಿ ಜಾರಿಗೆ ತರುತ್ತಿದೆ ಮುಂದೆ ಕರ್ನಾಟಕಕ್ಕೆ ಇದೇ ಮಾದರಿ ಪರಿಚಯಿಸಲಾಗುವುದು.