Loan: ಸಹಕಾರಿ ಹಾಗು ರಾಷ್ಟೀಕೃತ ಬ್ಯಾಂಕ್ ಗಳಲ್ಲಿ ಸಾಲದ ಕಂತು ಬೆಂಕಿ ಇದ್ದವರಿಗೆ ಸಿಹಿಸುದ್ದಿ!
ಕೃಷಿ ಚಟುವಟಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಲಾಭ ಪಡೆಯಬೇಕು ಎಂದಾದರೆ ಅಷ್ಟೇ ಮಟ್ಟದಲ್ಲಿ ಬಂಡವಾಳವನ್ನು ಕೂಡ ಹೂಡಿಕೆ ಮಾಡಬೇಕು. ಭತ್ತ, ದವಸ ಧಾನ್ಯದಿಂದ ತೋಟಗಾರಿಕೆ ಕೃಷಿಯಾದ ರಬ್ಬರ್ , ತೆಂಗು, ಅಡಿಕೆ, ಕಾಫಿ ಇನ್ನೂ ಇತರ ಬೆಳೆಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವರೆಗೆ ಮನ್ನಣೆ ಇದ್ದೇ ಇರಲಿದೆ. ಕೃಷಿ ಕ್ಷೇತ್ರದಲ್ಲಿ ಅಧಿಕ ಲಾಭ ಪಡೆಯಬೇಕು ಎಂದು ಬಯಸುವವರು ಬಂಡವಾಳ ಇಲ್ಲದೆ ಬಳಿಕ ಸಾಲ ಸೂಲ (Loan) ಮಾಡುತ್ತಾರೆ.
ರೈತರಿಗಾಗಿಯೇ ಬ್ಯಾಂಕ್ ಸಾಲ:
ರೈತರಿಗಾಗಿ ಅನೇಕ ರಾಷ್ಟೀಕೃತ ಬ್ಯಾಂಕಿನಲ್ಲಿ ಯೋಜನೆ ಅಡಿಯಲ್ಲಿ ಕೃಷಿ ಚಟುವಟಿಕೆಗೆ ಕಡಿಮೆ ಬಡ್ಡಿದರದ ಸಾಲ (Loan) ಸೌಲಭ್ಯ ಲಭ್ಯವಾಗುತ್ತಿದ್ದು ಒಂದೊಂದು ಯೋಜನೆ ಕೂಡ ಒಂದೊಂದು ವಿಧವಾಗಿ ಪ್ರಾಮುಖ್ಯತೆ ಪಡೆಯುತ್ತಿದೆ. ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಸಿಗುತ್ತಿದ್ದು ಇದರ ಜೊತೆಗೆ ಸಬ್ಸಿಡಿ ಮೊತ್ತ ಕೂಡ ಸಿಗುತ್ತಿದೆ. ಕೃಷಿಯಲ್ಲಿ ಸಾಲ ಪಡೆದ ರೈತರು ತಾವು ಬೆಳೆದ ಬೆಳೆ ಮಾಡಿ ಬಳಿಕ ಸಾಲ ತೀರಿಸಲು ಸಾಕಷ್ಟು ಸಮಯಾವಕಾಶ ಇದೆ. ಆದರೆ ಈ ಬಾರಿ ರಾಜ್ಯದ ಅನೇಕ ಕಡೆ ಬರಗಾಲ, ಹವಾಮಾನ ವೈಪರಿತ್ಯ, ಬೆಳೆ ನಾಶ ಅದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರೆ.
ಶುಭ ಸುದ್ದಿ:
ರಾಜ್ಯದ ರೈತರು ಕೃಷಿ ಉದ್ದೇಶಕ್ಕಾಗಿ ಬೇರೆ ಬೇರೆ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದು ಮಳೆ ಸರಿಯಾಗಿ ಬಾರದೇ ರೈತರ ಬೆಳೆ ಎಲ್ಲ ನಾಶವಾಗಿದೆ. ಈ ಪರಿಸ್ಥಿತಿಯಲ್ಲಿ ಬ್ಯಾಂಕ್ ಸಾಲ (Bank Loan) ಮರುಕಳಿಸುವುದು ಕೂಡ ಕಷ್ಟಕರವಾಗಿದ್ದು ಹೀಗಾಗಿ ಸರಕಾರ ರೈತರ ಅನುಕೂಲಕ್ಕಾಗಿ ರೈತರ ಸಾಲವನ್ನು ಮನ್ನ ಮಾಡಲು ಮುಂದಾಗಿದೆ. ಈ ವಿಚಾರ ಸಾಲ ಪಡೆದ ರೈತರ ಪಾಲಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಹಾಗಾದರೆ ಎಷ್ಟು ಸಾಲ ಮನ್ನ ಆಗಲಿದೆ ಎಂಬ ಮಾಹಿತಿ ತಿಳಿಯಲು ಈ ಲೇಖನ ಪೂರ್ತಿ ಓದಿ.
ಯಾವುದು ಈ ಯೋಜನೆ:
ಹಣದುಬ್ಬರ ಹೆಚ್ಚಳವಾದ ಕಾರಣ ಕೃಷಿ ಉಪಕರಣಗಳು ಈಗ ತುಂಬಾ ದುಬಾರಿ ಆಗಿದೆ. ಹಾಗಾಗಿ ಸಾಲ (Loan) ಪಡೆಯುವ ಮೂಲಕ ಕೃಷಿ ಪರಿಕರ ಮತ್ತು ಬೀಜ, ರಸಗೊಬ್ಬರ ಇತ್ಯಾದಿಯನ್ನು ಪಡೆದು ಕೃಷಿ ಮಾಡುತ್ತಿದ್ದಾರೆ. ನೈಸರ್ಗಿಕ ವಿಕೋಪ ಇತ್ಯಾದಿ ಕಾರಣಕ್ಕೆ ಬ್ಯಾಂಕ್ ನಿಂದ ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಕಿಸಾನ್ ಸಾಲ ಮನ್ನಾ ಯೋಜನೆ ಅಂತವರಿಗೆ ನೆರವಾಗಲಿದೆ.
ಯಾವೆಲ್ಲ ದಾಖಲೆ ಅಗತ್ಯ, ಅರ್ಹತೆ ಏನು?
- ಈ ಕಿಸಾನ್ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಅರ್ಜಿ ಹಾಕಲು ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಡಿತರ ಕಾರ್ಡ್, ಭೂಮಿಗೆ ಸಂಬಂಧ ಪಟ್ಟ ದಾಖಲೆಗಳು, ಬ್ಯಾಂಕ್ ಖಾತೆಯ ವಿವರ, ಪಾಸ್ ಪೋರ್ಟ್ ಫೋಟೋ, ಮೊಬೈಲ್ ಸಂಖ್ಯೆ ಇತ್ಯಾದಿ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
- ಈ ಯೋಜನೆಗೆ ರಾಜ್ಯದ ನಿವಾಸಿ ಪ್ರಮಾಣ ಪತ್ರ ಹೊಂದಿದಬೇಕು, ಮೂರು ಹೆಕ್ಟೇರ್ ಗಿಂತ ಕಡಿಮೆ ಭೂ ಪ್ರದೇಶ ಹೊಂದಿರಬೇಕು. *ಸರಕಾರಿ ಹಾಗೂ ಉನ್ನತ ಹುದ್ದೆಯಲ್ಲಿ ಇರುವವರಿಗೆ ಈ ಯೋಜನೆ ಫಲಾನುಭವಿಗಳಾಗಲು ಸಾಧ್ಯವಿಲ್ಲ.
- 5ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದವರಿಗೆ ಈ ಯೋಜನೆ ಪ್ರಯೋಜನೆ ನೀಡಲಾಗುವುದಿಲ್ಲ.
ಎಷ್ಟು ಸಾಲ ಮನ್ನಾ ಆಗಲಿದೆ?
ಕಿಸಾನ್ ಸಾಲ ಮನ್ನಾ ಯೋಜನೆ (Kisan Loan Waiver Scheme) ಅಡಿಯಲ್ಲಿ ರೈತರು ಸಾಲ ಪಡೆದ ದಾಖಲಾತಿ ಸಮೇತ ಮನ್ನಾ ಮಾಡಲು ಈ ಯೋಜನೆ ಅಡಿಯಲ್ಲಿ ಅರ್ಜಿ ಹಾಕಬೇಕು.ಬಳಿಕ ಸರಕಾರದ ಕೃಷಿ ಇಲಾಖೆಯಿಂದ ಫಲಾನುಭವಿಗಳ ಪಟ್ಟಿ ಸಿದ್ಧವಾಗಲಿದೆ. ಈ ಬಾರಿ ಕೂಡ ಸಾಲ ಮನ್ನದಲ್ಲಿ 5ಲಕ್ಷಕ್ಕೂ ಅಧಿಕ ಜನ ಅರ್ಜಿ ಹಾಕಿದ್ದು 1ಲಕ್ಷ ರೂಪಾಯಿ ತನಕವೂ ಸಾಲ ಮನ್ನಾ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಹಣ ಕೂಡ ರಾಜ್ಯ ಬಜೆಟ್ ನಲ್ಲಿ ಮೀಸಲಿಟ್ಟಿದ್ದು ಕೇಂದ್ರದ ಅನುದಾನ ಕೂಡ ಸಿಗಲಿದೆ.