Agriculture Loan: ಇಲ್ಲಿ ಸಾಲ ಪಡೆದುಕೊಂಡಿದ್ದ ರೈತರ ಸಂಪೂರ್ಣ ಸಾಲ ಮನ್ನಾ! ಬಿಗ್ ಬಿಗ್ ಅಪ್ಡೇಟ್
The Agriculture Debt Waiver: ರೈತರು ಈ ದೇಶದ ಮುಖ್ಯ ಅಂಗವಾಗಿದ್ದು ಸರಕಾರ ಕೂಡ ರೈತರ ಅಭಿವೃದ್ಧಿ ಗಾಗಿ ಹೆಚ್ಚಿನ ಬೆಂಬಲವನ್ನು ನೀಡುತ್ತಿದೆ.ಈಗಾಗಲೇ ರೈತರಿಗೆ ಕೃಷಿ ಸಿಂಚಾಯಿ ಯೋಜನೆ, ರೈತ ಮಿತ್ರ ಯೋಜನೆ ಇತ್ಯಾದಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೋತ್ಸಾಹ ವನ್ನು ನೀಡುತ್ತಿದೆ.ಅದೇ ರೀತಿ ಈ ಭಾರಿ ಮಳೆ ಬಾರದೇ ತೀವ್ರ ಬಿಸಿಲಿನಿಂದ ರೈತರು ನಷ್ಟ ಅನುಭವಿಸಿದ್ದು ಬಹಳಷ್ಟು ಕಷ್ಟದಲ್ಲಿದ್ದಾರೆ.ಈಗಾಗಲೇ ರಾಜ್ಯ ಸರಕಾರವು ಬೆಳೆ ಹಾನಿ ಮೊತ್ತದ ಮೊದಲನೇ ಕಂತಿನ ಹಣವನ್ನು ಒಬ್ಬ ರೈತನಿಗೆ ಎರಡು ಸಾವಿರ ರೂಪಾಯಿಯಂತೆ ಬಿಡುಗಡೆ ಮಾಡಿದ್ದು ಇದೀಗ ಸಾಲ ಮನ್ನಾ ಕುರಿತಂತೆ ಗುಡ್ ನ್ಯೂಸ್ ನೀಡಿದೆ.
ಎಷ್ಟು ಸಾಲ ಮನ್ನಾ?
ಇದೀಗ ರಾಜ್ಯ ಸರಕಾರವು ರೈತರಿಗೆ ಗುಡ್ ನ್ಯೂಸ್ ನೀಡಿದ್ದು ಸಣ್ಣ ರೈತರ ಸಾಲವನ್ನು ಮನ್ನಾ ಮಾಡಲು ಹೊರಟಿದೆ. ಹೌದು ಕ್ರೆಡಿಟ್ ಕಾರ್ಡ್(Credit Card Loan) ಯೋಜನೆಯಡಿ ಸಾಲ ಪಡೆದಿದ್ದ ರೈತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಒಂದು ಲಕ್ಷದವರೆಗಿನ ಕೃಷಿ ಸಾಲಕ್ಕೆ ರಾಜ್ಯ ಸರಕಾರವು ಇದೀಗ ವಿನಾಯಿತಿ ನೀಡಿದೆ.
ಇವರಿಗೆ ಈ ವಿನಾಯಿತಿ ಇದೆ
ಈಗಾಗಲೇ ಕೆಲವು ರೈತರು ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಹಲವು ಖಾಸಗಿ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆದಿದ್ದು ರೈತರಿಗೆ ಸಾಲ ಮರುಪಾವತಿ ಮಾಡಲು ಕಷ್ಟ ಸಾಧ್ಯ ವಾಗಿರುವ ನಿಟ್ಟಿನಲ್ಲಿ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಸಾಲ ಮರು ಪಾವತಿಸಲು ಕಷ್ಟವಾಗಿರುವ ರೈತರಿಗೆ ಒಂದು ಲಕ್ಷದವರೆಗೆ ವಿನಾಯಿತಿ ನೀಡಿದೆ.ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ರೈತರು ಮತ್ತು ಈ ಯೋಜನೆಯಲ್ಲಿ ರೈತರ ಹೆಸರಿದ್ದರೆ ನೀವು ಈ ಯೋಜನೆಯ ಸೌಲಭ್ಯ ಪೇಯಬಹುದು.
ನೀವು ತಿಳಿದುಕೊಳ್ಳಬಹುದು
ಕೃಷಿ ಸಾಲ ಮನ್ನಾ ಯೋಜನೆಯ ಪಟ್ಟಿ ಈಗಾಗಲೇ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು ತಮ್ಮ ಸಾಲ ಮನ್ನಾ ಆಗಿದೆಯೇ ಎಂದು ತಿಳಿದುಕೊಳ್ಳಬಹುದು. ನೀವು raitamitra.karnataka.gov.in ಗೆ ಭೇಟಿ ನೀಡಿ ಈ ಬಗ್ಗೆ ಚೆಕ್ ಮಾಡಬಹುದಾಗಿದೆ.
ಎರಡನೇ ಕಂತಿನ ಬರ ಪರಿಹಾರ ಮೊತ್ತವು ಜಮೆ?
ಈಗಾಗಲೇ ಬರ ಪರಿಹಾರ ಮೊತ್ತವು ರೈತರ ಖಾತೆಗೆ ಮೊದಲ ಕಂತು ಬಿಡುಗಡೆಯಾಗಿದ್ದು ಎರಡನೇ ಕಂತು ಇನ್ನಷ್ಟೆ ಜಮೆಯಾಗಬೇಕಿದೆ.ಈಗಾಗಲೇ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದ ನಂತರ ಎರಡನೇ ಕಂತಿನಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಬಗ್ಗೆ ಈಗಾಗಲೇ ರಾಜ್ಯ ಸರಕಾರ ಈಗಾಗಲೇ ಕೇಂದ್ರ ಸರಕಾರದ ವಿರುದ್ಧ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು ಹಣ ಬಿಡುಗಡೆ ಮಾಡುವ ಬಗ್ಗೆ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ.ಹಾಗಾಗಿ ಮುಂದಿನ ದಿನದಲ್ಲಿ ಹಣ ಬಿಡುಗಡೆ ಯಾಗುವ ಸಾಧ್ಯತೆ ಇದೆ.