Karnataka Times
Trending Stories, Viral News, Gossips & Everything in Kannada

PM Surya Ghar: ಬಿಪಿಎಲ್ ಕಾರ್ಡ್ ದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್ ! ರಾಜ್ಯದಿಂದ ಮಾತ್ರವಲ್ಲ ಕೇಂದ್ರದಿಂದ ಸಿಗಲಿದೆ ಉಚಿತ ವಿದ್ಯುತ್.

advertisement

ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಉಚಿತವಾಗಿ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ತನ್ನು ಪಡೆದುಕೊಳ್ಳುತ್ತಿದ್ದೀರಿ. ಇನ್ನು ಈ ಪ್ರಯೋಜನ ಸಿಗದೇ ಇರುವವರೆಗೂ ಕೂಡ ಮತ್ತೊಂದು ಸಿಹಿ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. 300 ಯೂನಿಟ್ ವರೆಗೆ ಈ ಯೋಜನೆ ಮೂಲಕ ಉಚಿತವಾಗಿ ವಿದ್ಯುತ್ ಪಡೆಯಬಹುದು ಅದಷ್ಟೇ ಅಲ್ಲದೆ ವಿದ್ಯುತ್ ಮಾರಾಟವನ್ನು ನೀವೇ ಮಾಡಿ ಹಣವನ್ನು ಕೂಡ ಸಂಪಾದಿಸಬಹುದಾಗಿದೆ.

ಸೂರ್ಯ ಘರ್ (PM Surya Ghar) ಮಫ್ತ್ ಬಿಜ್ಲಿ ಯೋಜನೆ :

ಈಗ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು ಪ್ರತಿ ಮನೆಗಳ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಸುಮಾರು ಒಂದು ಕೋಟಿಗೂ ಅಧಿಕ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲು ಕೇಂದ್ರ ಸರ್ಕಾರ 75,000 ಕೋಟಿ ರೂಪಾಯಿಗಳನ್ನು PM Surya Ghar ಯೋಜನೆಗೆ ಅನುದಾನ ನೀಡಿದೆ. 300 ಯೂನಿಟ್ ಉಚಿತ ವಿದ್ಯುತ್ತನ್ನು ಈ ಮೂಲಕ ಸುಮಾರು ಒಂದು ಕೋಟಿ ಕುಟುಂಬಗಳು ಪಡೆದುಕೊಳ್ಳುತ್ತವೆ.

ಸೋಲಾರ್ ಪ್ಯಾನೆಲ್ (Solar Panel) ಅಳವಡಿಸಲು ಸಬ್ಸಿಡಿ :

ನಾಗರಿಕರಿಗೆ ಯಾವುದೇ ರೀತಿಯ ಆರ್ಥಿಕ ಹೊರೆ ಸೋಲಾರ್ ಪ್ಯಾನೆಲ್ (Solar Panel) ಅಳವಡಿಸಲು ಆಗದಂತೆ ಸಾಲ ಸೌಲಭ್ಯವನ್ನು ಬ್ಯಾಂಕ್ ನಲ್ಲಿ ಸರ್ಕಾರ ಕೊಡಿಸುತ್ತದೆ, ಇದಕ್ಕಾಗಿ ಥರ್ಡ್ ಪಾರ್ಟಿ ಕಂಪನಿಗಳು ಕೂಡ ಸಹಕರಿಸಲಿದ್ದು ಈ ಮೂಲಕ ಸೋಲಾರ್ ಪ್ಯಾನೆಲ್ ಗಳನ್ನು ಜನರಿಗೆ ಒದಗಿಸುವ ವ್ಯವಸ್ಥೆ ಸರ್ಕಾರ ಮಾಡಲಿದೆ. ಇದೊಂದು ಸಂಪೂರ್ಣ ಡಿಜಿಟಲೀಕರಣ ವ್ಯವಸ್ಥೆಯಾಗಿದ್ದು ಆನ್ಲೈನ್ ನಲ್ಲಿ ಎಲ್ಲ ಮಾಹಿತಿಗಳನ್ನು ಅಪ್ಲೋಡ್ ಮಾಡುವುದರ ಮೂಲಕ ಉಚಿತ ಸೋಲಾರ್ ಪ್ಯಾನೆಲ್ ಅನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

advertisement

 

ಉಚಿತ ಸೋಲಾರ್ ಪ್ಯಾನೆಲ್ ಯೋಜನೆಗೆ ಅರ್ಜಿ ಸಲ್ಲಿಸಿ :

ಎಲ್ಲ ವಸತಿ ಗ್ರಾಹಕರು ಸೌರ ಶಕ್ತಿ ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸೋಣ ಎನ್ನುವ ಘೋಷವಾಕ್ಯದೊಂದಿಗೆ ವಿಶೇಷವಾಗಿ PM Surya Ghar ಯೋಜನೆಗೆ ಹೆಚ್ಚಿನ ಬೆಂಬಲವನ್ನು ಯುವಕರು ನೀಡಲು https://at-pmsuryaghar.gov.in/ಈ ಮೂಲಕ ಸಹಕರಿಸಬೇಕಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸದ್ಯದಲ್ಲಿಯೇ ಪ್ರತಿಮನೆಯ ಮೇಲ್ಚಾವಣಿಯ ಮೇಲೆ ಇನ್ನೇನು ಸೋಲಾರ್ ಪ್ಯಾನೆಲ್ ಅಳವಡಿಸುವ ವ್ಯವಸ್ಥೆ ಪ್ರಾರಂಭವಾಗುತ್ತದೆ ಆದಷ್ಟು ಸಹಕಾರದೊಂದಿಗೆ ಗ್ರಾಹಕರು ಕೈಜೋಡಿಸಿ ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲು ಸಹಕರಿಸಿದರೆ ಉಚಿತವಾಗಿ 300 ಯೂನಿಟ್ ವರೆಗೆ ವಿದ್ಯುತ್ ಅನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಆದಾಯವನ್ನು ಕೂಡ ಅದರಿಂದ ಗಳಿಸಬಹುದು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಮಾತ್ರವಲ್ಲದೆ ಇದೀಗ ಕೇಂದ್ರ ಸರ್ಕಾರವು ಕೂಡ ರಾಜ್ಯದ ಜನರಿಗೆ ಉಚಿತ ವಿದ್ಯುತ್ತನ್ನು ನೀಡಲು ನಿರ್ಧರಿಸಿದ್ದು ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸುವ ಮೂಲಕ ಆದಾಯವನ್ನು ಕೂಡ ಪಡೆಯಬಹುದಾಗಿದೆ. ಕೇವಲ ಉಚಿತ ವಿದ್ಯುತ್ ಮಾತ್ರವಲ್ಲದೇ ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಬಡವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

advertisement

Leave A Reply

Your email address will not be published.