T20 Worldcup: ದುಬೆ, ಪಾಂಡ್ಯ, ಜಡೇಜಾ ಅಲ್ಲ T20 ವಿಶ್ವಕಪ್ ಗೆ ಸಿಕ್ಸರ್ ಸಿದ್ದು ಆಯ್ಕೆ ಮಾಡಿದ್ದು ಈ ಆಲ್ರೌಂಡರ್!
ಈಗಾಗಲೇ ಐಪಿಎಲ್ ನಡೆಯುತ್ತಿದ್ದರೂ ಕೂಡ ಪ್ರತಿಯೊಬ್ಬ ನಿಜವಾದ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿ ಎದುರು ನೋಡುತ್ತಿರುವುದು ಇದೇ ಜೂನ್ ತಿಂಗಳಿಂದ ಪ್ರಾರಂಭವಾಗಲಿರುವಂತಹ ಟಿ ಟ್ವೆಂಟಿ ವಿಶ್ವಕಪ್ (T20 Worldcup). ಇನ್ನು ಈ ಬಾರಿಯ t20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾರೆಲ್ಲಾ ಆಡಳಿದ್ದಾರೆ ಅನ್ನುವಂತಹ ಲೆಕ್ಕಾಚಾರಗಳು ಹಾಗೂ ಊಹಾಪೋಹಗಳ ಆಟ ಈಗಾಗಲೇ ಪ್ರಾರಂಭವಾಗಿದೆ. ಅದರಲ್ಲಿ ವಿಶೇಷವಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರು ಈ ರೀತಿಯ ಊಹಾಪೋಹಗಳನ್ನು ಪ್ರಾರಂಭ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ಮಾತನಾಡೋಕೆ ಹೊರಟಿರುವುದು ನವಜೋತ್ ಸಿಂಗ್ ಸಿದ್ದು ಅವರ ಬಗ್ಗೆ.
ಟಿ ಟ್ವೆಂಟಿ ವಿಶ್ವಕಪ್ (T20 Worldcup)ಗೆ ಟೀಮ್ ಇಂಡಿಯಾಗೆ ಈ ಆಲ್ರೌಂಡರ್ ಬೆಸ್ಟ್!
ಸಿದ್ದು ತಮ್ಮ ಮನಮೋಹಕವಾಗಿರುವಂತಹ ಕಾಮೆಂಟರಿ ಮಾಡೋದಿಕ್ಕೆ ಜನಪ್ರಿಯರು. ಇದೇ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಅವರನ್ನು ಇಷ್ಟ ಪಡ್ತಾರೆ. ಇನ್ನು ಈ ಬಾರಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಪ್ರಾರಂಭ ಆಗಲಿರುವಂತಹ ಯಾರನ್ನು ಆಯ್ಕೆ ಮಾಡಬೇಕು ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಆಲ್ ರೌಂಡರ್ಗಳ ಬಗ್ಗೆ ಮಾತನಾಡುವುದಾದರೆ ಈ ರೇಸ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ರವೀಂದ್ರ ಜಡೇಜಾ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಕಾಣಿಸಿಕೊಳ್ಳುತ್ತಾರೆ. ಇವರೆಲ್ಲರನ್ನು ಮೀರಿಸುವಂತಹ ಒಬ್ಬ ಆಲ್-ರೌಂಡರ್ ಈಗ ನವಜೋತ್ ಸಿಂಗ್ ಸಿದ್ದು ಅವರ ಮನಸ್ಸನ್ನು ಗೆದ್ದಿದ್ದಾನೆ. ಹೌದು ಅವರು ಮಾತಾಡ್ತಿರೋದು ಅಕ್ಷರ್ ಪಟೇಲ್(Axar Patel) ಅವರ ಬಗ್ಗೆ.
ಈ ಬಾರಿ ಐಪಿಎಲ್ ನಲ್ಲಿ ಕೂಡ ದೆಹಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಅಕ್ಷಲ್ ಪಟೇಲ್ ಅವರು ಉತ್ತಮ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ ಎಂಬುದಾಗಿ ನವ್ಜೋತ್ ಸಿಂಗ್ ಸಿದ್ದು ಹೇಳಿಕೊಂಡಿದ್ದಾರೆ. ದೆಹಲಿ ತಂಡದಲ್ಲಿ ರಿಷಬ್ ಪಂತ್ ತಮ್ಮ ಒತ್ತಡವನ್ನು ಮರೆತು ಆಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಕೆಲ ಕ್ರಮದಲ್ಲಿ ಅಕ್ಷರ ಪಟೇಲ್ ರವರು ತಮ್ಮ ಜವಾಬ್ದಾರಿಯನ್ನು ಅರಿತು ಚೆನ್ನಾಗಿ ಆಡುತ್ತಿದ್ದಾರೆ ಎಂಬುದಾಗಿ ಸಿದ್ದು ಹೇಳಿಕೊಂಡಿದ್ದು ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ ಗೆ ಖಂಡಿತವಾಗಿ ಅವರೊಬ್ಬ ಉತ್ತಮ ಆಯ್ಕೆ ಆಗಿರುವುದರಿಂದ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಿದ್ದು ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ತಮ್ಮ ಜವಾಬ್ದಾರಿಯನ್ನು ಅಕ್ಷರ್ ಪಟೇಲ್ ಪರ್ಫೆಕ್ಟ್ ಆಗಿ ನಿಭಾಯಿಸುತ್ತಾರೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಇದು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಯಾವ ರೀತಿಯಲ್ಲಿ ಸಾಬೀತಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.