Akrama Sakrama 2024: ಸರ್ಕಾರದ ಜಾಗದಲ್ಲಿ ಹಲವು ವರ್ಷಗಳಿಂದ ದಾಖಲೆಗಳಿಲ್ಲದೆ ಇದ್ದವರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್!
Akrama Sakrama Scheme by Government of Karnataka: ರೈತರ ಅಭಿವೃದ್ಧಿ ಬಹಳ ಮುಖ್ಯ.ಹಾಗಾಗಿ ರೈತರಿಗೆ ಕೃಷಿ ಕಾರ್ಯ ಚಟುವಟಿಕೆ ಮಾಡಲು ಪ್ರೋತ್ಸಾಹ ನೀಡಿದರೆ ಮಾತ್ರವೇ ರೈತರು ಕೂಡ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಇಂದು ಸರಕಾರ ಕೂಡ ಕೃಷಿಗೆ ಬೆಂಬಲ ನೀಡುವಲ್ಲಿ ಹೆಚ್ಚು ಸೌಕರ್ಯಗಳನ್ನು ನೀಡುತ್ತಿದ್ದು ಈಗಾಗಲೇ ಕೃಷಿ ಯಂತ್ರೋಪಕರಣ,ಕೃಷಿ ಬೀಜಗಳ ವಿತರಣೆ,ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ರೈತರಿಗಾಗಿ ನೀಡುತ್ತಿದೆ. ಅದೇ ರೀತಿ ಹೆಚ್ಚಿನ ರೈತರಿಗೆ ಕೃಷಿ ಮಾಡಬೇಕೆಂಬ ಒಲವು ಇದ್ದರೂ ಕೂಡ ಕೃಷಿ ಭೂಮಿಯ ತೊಂದರೆ ಯಾಗುತ್ತಿದೆ. ತಮ್ಮ ಸ್ವಂತ ಭೂಮಿ ಇಲ್ಲದೆ ,ಭೂ ದಾಖಲೆಗಳು ಇಲ್ಲದೆ ರೈತರಿಗೆ ಯಾವುದೇ ರೀತಿಯ ಸೌಲಭ್ಯ ಗಳು ದೊರೆಯುತ್ತಿಲ್ಲ.ಇದಕ್ಕಾಗಿ ರಾಜ್ಯ ಸರಕಾರ ರೈತರಿಗಾಗಿ ಗುಡ್ ನ್ಯೂಸ್ ನೀಡಿದೆ.
ಸಕ್ರಮ ಮಾಡಿಕೊಳ್ಳಬಹುದು(What is Akrama Sakrama?)
ಸರ್ಕಾರಿ ಹೆಸರಿನಲ್ಲಿರುವ ಜಮೀನುಗಳಲ್ಲಿ ಸಾಗುವಳಿಯನ್ನು ಮಾಡುವ ರೈತರು ಮತ್ತು ಸ್ವ ಅಲ್ಲದ ಭೂಮಿಯನ್ನು ಸಕ್ರಮವಾಗಿ ಮಾಡಿಕೊಳ್ಳಲು ರಾಜ್ಯ ಸರಕಾರವು ಇದೀಗ ಅವಕಾಶ ನೀಡಿದೆ.ಈ ಅಕ್ರಮ ಸಕ್ರಮ ಯೋಜನೆ ಅಡಿ ಬರುವ ಭೂಮಿಯಲ್ಲಿ ರೈತನು ಉಳಿಮೆಯನ್ನು ಮಾಡುತ್ತಿದ್ದರೆ ಅದರಿಂದ ಕೃಷಿಯಲ್ಲಿ ಇಳುವರಿ ಪಡೆಯುತ್ತಿದ್ದರೆ ಆ ಭೂಮಿಯನ್ನು ಸ್ವಂತದ್ದಾಗಿ ಮಾಡಿಕೊಡುವ ಅವಕಾಶವನ್ನು ಕಲ್ಪಿಸುತ್ತದೆ ಹಾಗೂ ತನ್ನ ಜಮೀನಿನ ಮೇಲೆ ಅಧಿಕಾರವನ್ನೂ ಆ ರೈತನು ಪಡೆಯುವಂತೆ ಮಾಡಲಿದೆ.
ಅರ್ಜಿ ಸಲ್ಲಿಕೆ ಮಾಡಬಹುದು(State government to modify Akrama Sakrama rules)
ಈ ರೀತಿಯ ಭೂಮಿಯನ್ನು ರೈತನು ತನ್ನ ಹೆಸರಿಗೆ ಮಾಡಿಕೊಳ್ಳಲು ಅರ್ಜಿ ತಮ್ಮ ಹತ್ತಿರದ ನಾಡಕಚೇರಿಗೆ ತೆರಳಿ ಅಲ್ಲಿ ಅರ್ಜಿಯನ್ನು ಪಡೆದು ಅಗತ್ಯ ಇರುವ ದಾಖಲಾತಿಗಳನ್ನು ನೀಡಬೇಕು.ಈ ಎಲ್ಲ ದಾಖಲೆಗಳನ್ನು ಅಲ್ಲಿನ ಅಧಿಕಾರಿ ಪರಿಶೀಲನೆ ಮಾಡಿ ಅರ್ಜಿ ನೋಂದಣಿ ನಮೂನೆಯನ್ನು ಕರ್ನಾಟಕದ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಸಲ್ಲಿದರೆ ಅರ್ಜಿ ಸ್ವೀಕೃತಿ ಯಾಗಲಿದೆ.
ಯಾವೆಲ್ಲ ಭೂಮಿ ಸಿಗಲಿದೆ?
ಕೃಷಿ ಭೂಮಿ ಇಲ್ಲದೆ ಇರುವ ರೈತರು ಸರ್ಕಾರದ ಗೋಮಾಳವನ್ನು ಸಾಗುವಳಿ ಭೂಮಿಯಾಗಿ ಮಾಡಿಕೊಂಡ ಜಾಗ ಇರಬಹುದು, ಸರಕಾರದ ಭೂಮಿ ಯಾಗಿದ್ದು ಅಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಯದೇ ಇದ್ದರೆ ಆ ಭೂಮಿ ತನ್ನ ಹೆಸರಿಗೆ ಮಾಡಿಕೊಳ್ಳಬಹುದಾಗಿದೆ.ಕೃಷಿ ಚಟುವಟಿಕೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸ ಮಾಡಿದರೂ ಆ ಜಮೀನು ರೈತರ ಪಾಲಾಗುವುದಿಲ್ಲ.ಈಗಾಗಲೇ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದೆ.
ಬಗರ್ ಹುಕುಂ ಆ್ಯಪ್
ಈಗಾಗಲೇ ರಾಜ್ಯ ಸರ್ಕಾರವು ಭೂಮಿಯನ್ನು ಅಕ್ರಮ ಸಾಗುವಳಿದಾರರ ಪಾಲಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಬಗರ್ ಹುಕುಂ ಆ್ಯಪ್ ಬಿಡುಗಡೆ ಮಾಡಿದ್ದು ಇದರಿಂದ ಕೆಲಸ ಮತ್ತಷ್ಟು ಸುಲಭ ವಾಗಲಿದೆ. ಇಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆಯಬಹುದು,ಇದರ ಮೂಲಕ ಅರ್ಜಿ ವಿಲೇವಾರಿ ಮಾಡಿವುದು ಸುಲಭವಾಗಿದೆ.