Ration Card: ರೇಷನ್ ಕಾರ್ಡ್ ಬಗ್ಗೆ ಕರ್ನಾಟಕ ಸರ್ಕಾರದ ಹೊಸ ಸುತ್ತೋಲೆ! ಮುಖ್ಯವಾದ ಮಾಹಿತಿ
New Ration Card : ಬಡ ವರ್ಗದ ಜನರನ್ನು ಬಡವ ಮುಕ್ತ ರನ್ನಾಗಿ ಮಾಡಬೇಕು.ಅವರಿಗೆ ಆರ್ಥಿಕ ಬೆಂಬಲವನ್ನು ನೀಡಬೇಕು ಎಂಬ ಉದ್ದೇಶ ದಿಂದ ಪಡಿತರ ಕಾರ್ಡ್ ಮೂಲಕ ಆಹಾರ ಧಾನ್ಯ ವನ್ನು ಆಹಾರ ಇಲಾಖೆಯು ನೀಡುತ್ತಿದೆ. ಇಂದು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜೊತೆಗೆ ಹಣವನ್ನು ಕೂಡ ಖಾತೆಗೆ ಜಮೆ ಮಾಡುತ್ತಿದೆ.ಈ ನಿಟ್ಟಿನಲ್ಲಿ ಬಡವರ್ಗದ ಜನತೆಗೆ ಈ ಪಡಿತರ ಕಾರ್ಡ್ (Ration Card Karnataka) ಮೂಲಕ ಹಲವು ರೀತಿಯ ಸೌಲಭ್ಯ ಗಳು ದೊರಕುತ್ತಿದ್ದು ಈಗಾಗಲೇ ಹಲವು ಜನತೆ ಈ ಸೌಲಭ್ಯ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಈ ಹಿಂದೆ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳಿಗೂ ಗುಡ್ ನ್ಯೂಸ್ ಸಿಕ್ಕಿದ್ದು ಇದೀಗ ಹೊಸ ಕಾರ್ಡ್ ಅರ್ಜಿ ಅರ್ಜಿ ಸಲ್ಲಿಕೆ ಮಾಡಲು ಯಾರು ಅರ್ಹರು ಎನ್ನುವ ಮಾಹಿತಿ ಯನ್ನು ಆಹಾರ ಇಲಾಖೆ ಕೂಡ ನೀಡಿದೆ.
ಅವಕಾಶ ನೀಡಿದೆ
ಈಗಾಗಲೇ ಸಚಿವರು ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳಿಗೆ (BPL Card) ಅರ್ಜಿ ಹಾಕಬಹುದು ಎನ್ನುವ ಮಾಹಿತಿ ನೀಡಿದ್ದರು.ಅದೇ ರೀತಿ ಪಡಿತರ ಚೀಟಿಗಾಗಿ ಸಲ್ಲಿಕೆ ಮಾಡಿದ್ದ ಅರ್ಜಿಗಳನ್ನು ಪರಿಶೀಲನೆ ಮಾಡಿ ನೀಡಲಾಗುವುದು ಎಂದು ತಿಳಿಸಿದ್ದು ಕೆಲವರಿಗೆ ಕಾರ್ಡ್ ವಿತರಣೆ ಕೂಡ ಆಗಿದೆ.
ಹೊಸ ಕಾರ್ಡ್ ಪಡೆಯಲು ಇವರು ಅರ್ಹರು
ಹೊಸ ಪಡಿತರ ಚೀಟಿಯನ್ನು ಪಡೆಯಲು ಆ ವ್ಯಕ್ತಿ ಕರ್ನಾಟಕದ ನಿವಾಸಿ ಯಾಗಿದ್ದಲ್ಲಿ ಮಾತ್ರ ಈ ಕಾರ್ಡ್ ಗೆ ಅರ್ಜಿ ಹಾಕಲು ಅರ್ಹರು. ಇನ್ನು ಹೊಸ ಪಡಿತರ ಚೀಟಿ ಪಡೆಯಲು ಈಗಾಗಲೇ ಪಡಿತರ ಚೀಟಿ ಹೊಂದಿರದ ಕುಟುಂಬಗಳು, ಕಾರ್ಡ್ ಅವಧಿ ಮೀರಿದ್ದರೆ ಅರ್ಜಿ ಸಲ್ಲಿಕೆ ಮಾಡಲು ಅರ್ಹರು. ಹೊಸದಾಗಿ ಮದುವೆಯಾದವರು ಹೊಸ ಮನೆ ಮಾಡಿದ್ದರೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
ಈ ದಾಖಲೆಗಳು ಬೇಕು(Documents Required For New Ration Card Karnataka)
ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಲು ಕೆಲವು ದಾಖಲೆಗಳು ಅಗತ್ಯವಾಗಿ ಇದ್ದು ಈ ದಾಖಲೆಗಳು ಬೇಕು.
*ವೋಟರ್ ಐಡಿ,
*ಆಧಾರ್ ಕಾರ್ಡ್
*ಮತದಾರರ ಗುರುತಿನ ಪತ್ರ
*ಆದಾಯ ಪ್ರಮಾಣ ಪತ್ರ
*ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
*ಮೊಬೈಲ್ ಸಂಖ್ಯೆ ಇತ್ಯಾದಿ
ತಿದ್ದುಪಡಿಗೂ ಅವಕಾಶ( Ration Card Correction Karnataka)
ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಗೂ ಆಹಾರ ಇಲಾಖೆಯು ಅವಕಾಶ ನೀಡಿದೆ. ಕೆಲವು ಜನರು ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದರೂ ತಿದ್ದುಪಡಿ ರಿಜೆಕ್ಟ್ ಆಗಿದೆ.ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಎಪಿಎಲ್ ಕಾರ್ಡ್ ದಾರರೇ ಈ ತಿದ್ದುಪಡಿ ಗೆ ಅರ್ಜಿ ಹಾಕಿದ್ದಾರೆ.ಆಹಾರ ಇಲಾಖೆಯು ಈ ಬಗ್ಗೆ ಸೂಕ್ತವಾಗಿ ಗಮನ ವಹಿಸಿ ಕಾರ್ಡ್ ರಿಜೆಕ್ಟ್ ಮಾಡಿದೆ. ರೇಷನ್ ಕಾರ್ಡ್ ಪಡೆಯಲು ಕೂಡ ಸರಕಾರ ಹಲವು ಷರತ್ತುಗಳನ್ನು ನಿಗದಿ ಪಡಿಸಿದ್ದು ಈ ಷರತ್ತು ಮೀರಿ ಬಿಪಿಎಲ್,ಅಂತ್ಯೋದಯ ಕಾರ್ಡ್ ಮಾಡಿದ್ದರೆ ಅಂತವರ ಕಾರ್ಡ್ ಕೂಡ ರದ್ದು ಆಗಲಿದೆ.