Karnataka Times
Trending Stories, Viral News, Gossips & Everything in Kannada

Sonu Srinivas Gowda: ದತ್ತು ಮಗುವಿನ ಕೇಸ್ ನಲ್ಲಿ ಹೊಸ ಟ್ವಿಸ್ಟ್! ಸೋನು ಗೌಡ ಬಗ್ಗೆ ತಾಯಿಯಿಂದ ಊಹಿಸದ ಹೇಳಿಕೆ

advertisement

ಇಂದು ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಸ್ಟಾರ್ ಗಳದ್ದೆ ಹವಾ, ಯಾವುದೇ ವಿಡಿಯೋ ಮಾಡಿ ಹರಿಬಿಟ್ಟರೆ ಸಾಕು, ಹೆಚ್ಚು ವೈರಲ್ ಆಗಿ ಎಲ್ಲೆಡೆ ತಲುಪುತ್ತದೆ. ಸಾಮಾಜಿಕ ಮಾಧ್ಯಮ ಬಳಕೆ ಅಂದಾಗ ಅದರಲ್ಲಿ ಧನಾತ್ಮಕತೆಯು ಇದೆ, ನೆಗೆಟಿವ್ ಕೂಡ ಪರಿಣಾಮವಾಗಲಿದೆ. ಒಮ್ಮೆ ಫೇಮಸ್ ಆದ್ರೆ ಜನ ತುಂಬಾ ಇಷ್ಟ ಪಡ್ತಾರೆ, ಆದ್ರೆ ನೆಗೆಟಿವ್ ಆಗಿ ಟ್ರೋಲ್ ಆದ್ರೆ ಜನ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ತಾರೆ. ಅಂತದ್ರಲ್ಲಿ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ಮೂಲಕ ಮತ್ತಷ್ಟು ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ  (Sonu Srinivas Gowda)ಅವರು ಕೂಡ ಒಬ್ಬರು.

ಸೋನುಗೆ ಎದುರಾದ ಸಂಕಷ್ಟ:

ಬಿಗ್ಬಾಸ್ ಮನೆಯಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ನಡೆದ ‌ಕಹಿ ಘಟನೆಯನ್ನು ಹಂಚಿಕೊಂಡು ಸೋನು ಸಿಕ್ಕಾ ಪಟ್ಟೆ ಕಣ್ಣೀರು ಹಾಕಿದ್ರು. ಖಾಸಗಿ ವಿಡಿಯೋ ಲೀಕ್ ಆಗಿ ಭಾರೀ ವೈರಲ್ ಆಗಿ ಟ್ರೋಲ್ ಆಗಿದ್ದರು. ಇತ್ತಿಚೆಗಷ್ಟೆ ಮಾಲ್ಡೀವ್ಸ್ ನಲ್ಲಿ ಡ್ರೇಸ್ ಕುರಿತಂತೆ ಸಾಕಷ್ಟು ಟ್ರೋಲ್ ಆಗಿದ್ದರು. ಇದೀಗ ಮಗುವನ್ನು ದತ್ತು ತೆಗೆದುಕೊಂಡಿರುವ ವಿಚಾರವಾಗಿ ಪೊಲಿಸ್ ಮೆಟ್ಟಿಲೆರುವ ಸಂದರ್ಭ ಬಂದಿದೆ.

ವಿಡಿಯೋ ಹರಿಬಿಟ್ಟಿದ್ದೇ ಸಮಸ್ಯೆ ಆಯ್ತಾ ಸೋನುಗೆ?

ಇತ್ತೀಚೆಗೆ ಅಷ್ಟೇ ಸೋನು ಗೌಡ (Sonu Srinivas Gowda) ಸೇವಂತಿ ಎನ್ನುವ 8 ವರ್ಷದ ಬಡ ಬಾಲಕಿಯನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಹೇಳಿಕೊಂಡಿದ್ದರು. ಮಗುವಿನ ಜೊತೆಗೂ ಹೆಚ್ಚು ವಿಡಿಯೋಗಳನ್ನು ಮಾಡಿ ಹರಿ ಬಿಟ್ಟಿದರು. ಆದರೆ, ಸೋನು ಗೌಡ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿದ್ದಾರೆ ಎಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಜೆ.ಜೆ.ಆ್ಯಕ್ಟ್ ಅಡಿಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಗುವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ದೂರು ಕೂಡ ದಾಖಲಾಗಿದೆ.

 

advertisement

 

ಮಗುವಿನ ತಾಯಿ ದತ್ತು ನೀಡಿಲ್ಲ ಅಂದ್ರು:

 

Image Source: YT-Vistara News

 

ಇದೀಗ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ನಟಿಯನ್ನು ಬಂಧಿಸಿ ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ಸೋನು ಗೌಡ ಅವರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಇನ್ನು ಸ್ಥಳ ಮಹಜರು ಮಾಡಲು ಪೋಲಿಸರು ಭೇಟಿ ನೀಡಿದ ಸಂದರ್ಭದಲ್ಲಿ ಸೋನು ಗೌಡ ಜೊತೆ ಮಾತನಾಡಬೇಕು ಅಂತ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ. ಮಗುವಿನ ತಾಯಿ ಕೂಡ ಸೋನು ಗೌಡ (Sonu Srinivas Gowda) ಅವರಿಗೆ ಮಗು ದತ್ತು ನೀಡಿಲ್ಲ ಅನ್ನುವ ಹೇಳಿಕೆ ನೀಡಿದ್ದಾರೆ.

ಮಗುವಿನ ಚಿಕ್ಕಪ್ಪ ಆಕ್ರೋಶ:

ಈ ಬಗ್ಗೆ ಮಗುವಿನ ಚಿಕ್ಕಪ್ಪ, ಸೋನು ಗೌಡ ಗೆ ನಾವು ಮಗುವನ್ನ ದತ್ತು ನೀಡಿಲ್ಲ, ಆಕೆ ನಮಗೆ ಯಾವುದೇ ಹಣನೀಡಿಲ್ಲ. ನಮ್ಮ ಮಗಳನ್ನು ಓದಿಸುತ್ತೇನೆ. ಚೆನ್ನಾಗಿ ಸಾಕುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಈಗ ದತ್ತು ತೆಗೆದುಕೊಂಡಿದ್ದೇನೆ ಎಂದು ಹೇಳಿರುವ ಹೇಳಿಕೆ ಸರಿಯಲ್ಲ‌ ಅಂತ ಅಂದಿದ್ದಾರೆ.

advertisement

Leave A Reply

Your email address will not be published.