Anna Bhagya: ಬೆಳ್ಳಂಬೆಳಿಗ್ಗೆ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್
ಅನ್ನಭಾಗ್ಯ (Anna Bhagya) ಯೋಜನೆಯ ಮೂಲಕ ರಾಜ್ಯ ಸರಕಾರವು ಬಡವರ್ಗದ ಜನತೆಗೆ ನೆರವು ನೀಡುತ್ತಿದೆ. ಹೌದು ಕುಟುಂಬದ ಮುಖ್ಯಸ್ಥರ ಖಾತೆಗೆ ಆಹಾರ ಧಾನ್ಯಗಳ ಜೊತೆಗೆ 5 ಕೆ.ಜಿ. ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆಯನ್ನು ಕೂಡ ಮಾಸಿಕ ತಲಾ 170 ರೂ ನಂತೆ ಜಮೆ ಮಾಡುತ್ತಿದೆ. ಈಗಾಗಲೇ ಹೆಚ್ಚಿನ ಜನರು ಈ ಯೋಜನೆಯ ಫಲಾನುಭವಿಗಳು ಆಗಿದ್ದು ಹಂತ ಹಂತವಾಈಗಾಗಲೇ ಜನವರಿ ಮತ್ತು ಪೆಬ್ರವರಿ ತಿಂಗಳ ಅಕ್ಕಿ ಹಣ ಕೆಲವು ಜಿಲ್ಲೆಯ ಫಲಾನುಭವಿಗಳ ಖಾತೆಗೆ ಜಮೆ ಯಾಗಿದ್ದು ಈ ತಿಂಗಳ 31 ರ ಒಳಗೆ ಪ್ರತಿ ಜಿಲ್ಲೆಗಳ ಫಲಾನುಭವಿಗಳಿಗೂ ಜನವರಿ ಮತ್ತು ಪೆಬ್ರವರಿ ತಿಂಗಳ ಹಣ ಜಮೆಯಾಗಲಿದೆ ಎನ್ನುವ ಗುಡ್ ನ್ಯೂಸ್ ಮಾಹಿತಿಯೊಂದು ಲಭ್ಯವಾಗಿದೆ. ವಿವಿಧ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ವನ್ನು ಸರಕಾರ ಮಾಡುತ್ತಿದೆ.
Anna Bhagya ಹಣ ಜಮೆ?
ರಾಜ್ಯ ಸರಕಾರವು ಹತ್ತು ಕೆಜಿ ಅಕ್ಕಿ ನೀಡುವ ಭರವಸೆ ಯನ್ನು ಜನರಿಗೆ ನೀಡಿತ್ತು. ಆದ್ರೆ ಕೇಂದ್ರ ಸರಕಾರ ಇದಕ್ಕೆ ಒಪ್ಪದೇ ಇರುವ ಕಾರಣ ಅನ್ನ ಭಾಗ್ಯ ಯೋಜನೆಯಡಿ, 5kg ಅಕ್ಕಿಯ ಬದಲಾಗಿ ಕುಟುಂಬದ ಸದಸ್ಯರಿಗೆ 34 ರೂಪಾಯಿಯಂತೆ 170 ರೂಪಾಯಿ ಮೊತ್ತ ನೀಡಲಾಗುತ್ತಿದೆ. ಹಾಗಾಗಿ ಅಕ್ಕಿಯ ಕೊರತೆ ಇರುವ ವರೆಗೆ ಹಣ ಸಂದಾಯ ಮಾಡುವ ಭರವಸೆ ಯನ್ನೇ ಸರಕಾರ ನೀಡಿದೆ.
ಏನದು ಗುಡ್ ನ್ಯೂಸ್
ಈಗಾಗಲೇ ಜನವರಿ ಮತ್ತು ಪೆಬ್ರವರಿ ತಿಂಗಳ ಅನ್ನಭಾಗ್ಯ (Anna Bhagya) ಹಣ ಜಮೆಯಾಗಿಲ್ಲ ಎಂದು ಹೆಚ್ಚಿನ ಜನರ ಬಾಯಲ್ಲಿ ಕೇಳಿಬರುತ್ತಿರುವ ಮಾತು, ಈ ಬಗ್ಗೆ ಸರಕಾರವು ಸ್ಪಷ್ಟನೆ ನೀಡಿದ್ದು, ಹಣ ಯಾವಾಗ ಜಮೆ ಯಾಗಲಿದೆ ಎನ್ನುವ ಬಗ್ಗೆಯು ಮಾಹಿತಿ ಸಿಕ್ಕಿದೆ. ಈಗಾಗಲೇ ಜನವರಿ ಮತ್ತು ಪೆಬ್ರವರಿ ತಿಂಗಳ ಅಕ್ಕಿ ಹಣ ಕೆಲವು ಜಿಲ್ಲೆಯ ಫಲಾನುಭವಿಗಳ ಖಾತೆಗೆ ಜಮೆ ಯಾಗಿದ್ದು ಈ ತಿಂಗಳ 31 ರ ಒಳಗೆ ಪ್ರತಿ ಜಿಲ್ಲೆಗಳ ಫಲಾನುಭವಿಗಳಿಗೂ ಜನವರಿ ಮತ್ತು ಪೆಬ್ರವರಿ ತಿಂಗಳ ಹಣ ಜಮೆಯಾಗಲಿದೆ ಎನ್ನುವ ಗುಡ್ ನ್ಯೂಸ್ ಮಾಹಿತಿಯೊಂದು ಲಭ್ಯವಾಗಿದೆ.
ಇವರ ಖಾತೆಗೆ Anna Bhagya ಹಣ ಜಮೆ?
ಅದೇ ರೀತಿ ಅನ್ನಭಾಗ್ಯ ಯೋಜನೆಯ ಹಣವನ್ನು ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಎರಡನೇ ಮುಖ್ಯಸ್ಥನ ಖಾತೆಗೆ ಹಣ ಜಮೆ ಮಾಡಬಹುದು. ಅಂದರೆ ಕುಟುಂಬದ ಎರಡನೇ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬಹುದು ಎನ್ನುವ ಸ್ಪಷ್ಟನೆ ಯನ್ನು ಸರಕಾರ ನೀಡಿದೆ.
ಚೆಕ್ ಮಾಡಿ ತಿಳಿದುಕೊಳ್ಳಿ
ಹಣ ಜಮೆಯಾಗದೇ ಇದ್ದಲ್ಲಿ ಅನ್ನಭಾಗ್ಯ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿ ಹೊಸದಾಗಿ ಉಳಿತಾಯ ಖಾತೆ ತೆರೆಯಲು ಅವಕಾಶವಿದ್ದು ತಮ್ಮ ಆಧಾರ್, ರೇಷನ್ ಕಾರ್ಡ್ ಆಪ್ಡೆಟ್ ಮಾಡಿ ಮತ್ತೆ ನೊಂದಣಿ ಮಾಡಬಹುದು. ಇನ್ನು ಹಣ ಜಮೆಯಾಗಿರುವ ಬಗ್ಗೆ ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಇಲ್ಲಿ ಭೇಟಿ ನೀಡುವ ಮೂಲಕ ಪರಿಶೀಲನೆ ಮಾಡಬಹುದಾಗಿದೆ