Karnataka Times
Trending Stories, Viral News, Gossips & Everything in Kannada

Yuva Nidhi Yojana: ತಿಂಗಳಿಗೆ 3000 ರೂ ಬರುವ ರಾಜ್ಯ ಸರ್ಕಾರದ ಈ ಯೋಜನೆ 5000 ರೂ ಆಗುವ ಸಾಧ್ಯತೆ!

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಭಾರಿ ಸುದ್ದಿ ಮಾಡ್ತಾ ಇದ್ದು ಎಲ್ಲಾ ಯೋಜನೆಗಳ ಸವಲತ್ತುಗಳನ್ನು ಜನರು ಬಳಸಿಕೊಳ್ಳುತ್ತಿದ್ದಾರೆ, ಅದರಲ್ಲಿ ಮುಖ್ಯವಾಗಿ ಯುವನಿಧಿ ಯೋಜನೆ (Yuva Nidhi Yojana) ಕೂಡ ಒಂದಾಗಿದ್ದು ನಿರುದ್ಯೋಗಿ ಯುವಕ ಯುವತಿಯರಿಗೆ ಸಹಾಯಧನ ನೀಡುವ ಯೋಜನೆ ಇದಾಗಿದೆ. ಉದ್ಯೋಗ ಸಿಗುವವರೆಗೆ‌ ಈ ಯೋಜನೆಯ ಸಹಾಯಧನ ನೀಡಲಾಗುತ್ತದೆ. ಈ ಮೂಲಕ ನಿರುದ್ಯೋಗಿ ಪದವಿ ಹೊಂದಿರುವವರಿಗೆ ತಿಂಗಳಿಗೆ ರೂ 3,000 ಮತ್ತು ನಿರುದ್ಯೋಗಿ ಡಿಪ್ಲೋಮಾ ಹೊಂದಿರುವವರಿಗೆ ರೂ 1,500 ಹಣವನ್ನು ನೀಡಲಾಗುತ್ತದೆ.

ಈ ಹಣ ಇನ್ನೂ ಬಂದಿಲ್ವ?

ಈ ಯೋಜನೆಗೆ ಹಲವರು ನಿರುದ್ಯೋಗ ಯುವಕ ಯುವತಿಯರು ಅರ್ಜಿ ಸಲ್ಲಿಕೆ ಮಾಡಿದ್ದು ಅವರ ವಿದ್ಯಾಭ್ಯಾಸಕ್ಕೆ ತಕ್ಕ ಹಾಗೆ ಹಣವನ್ನು ಜಮಾ ಮಾಡಲಾಗುತ್ತದೆ. ಇನ್ನೂ ಪ್ರತಿ ತಿಂಗಳು ಕೂಡಾ ಯುವನಿಧಿ ಯೋಜನೆ (Yuva Nidhi Yojana) ಯ ಹಣ ಬರಬೇಕಿದ್ರೆ ಪ್ರತಿ ತಿಂಗಳು ಕೂಡ ಸ್ವಯಂ ಘೋಷಿತ ಪ್ರಮಾಣ ಪತ್ರ ಸಲ್ಲಿಸುವುದು ಕೂಡ ಕಡ್ಡಾಯವಾಗಿದೆ, ಇಲ್ಲದಿದ್ದಲ್ಲಿ ಈ ಹಣ ಜಮೆಯಾಗುವುದಿಲ್ಲ.

ಅಪ್ಲೋಡ್ ಮಾಡಬೇಕು:

ಹೌದು ಈ ಬಗ್ಗೆ ತಮಗೆ ಇನ್ನೂ ಉದ್ಯೋಗ ಸಿಕ್ಕಿಲ್ಲ ಅಥವಾ ನಾವು ಉನ್ನತ ಶಿಕ್ಷಣವನ್ನು ಮಾಡುತ್ತಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್ಲೋಡ್‌ ಮಾಡಿದ್ದರೆ ಮಾತ್ರ ಯುವನಿಧಿ (Yuva Nidhi Yojana) ಯ ಹಣ ಜಮೆ ಯಾಗುತ್ತದೆ. http://sevasindhugs.karnataka.gov.in/ ಸೇವಾ ಸಿಂಧು ಮೂಲಕ‌ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

advertisement

ಈ‌ ದಾಖಲೆ ಬೇಕು:

  • Photo
  • Aadhaar Card
  • Income Certificate
  • Academic Record
  • Bank Account Details

ತಿಂಗಳಿಗೆ ಐದು ಸಾವಿರ ಸಿಗಬಹುದೆ?

 

 

ಈಗಾಗಲೇ ತೆರಿಗೆ ಹಣ ವಿಚಾರವಾಗಿ ಕಾಂಗ್ರೇಸ್ ಪಕ್ಷ ಕೇಂದ್ರ ಸರಕಾರಕ್ಕೆ ವಿರುದ್ದ ವಾಗಿ ಮಾತನಾಡಿದ್ದು ನಮ್ಮ ರಾಜ್ಯದ ತೆರಿಗೆ ಹಣ ವಾಪಸ್ ಕೊಟ್ಟಿದ್ದೇ ಆದರೆ ಮಹಿಳೆಯರಿಗೆ ಈಗಿರುವ ಮಾಸಿಕ ಎರಡು ಸಾವಿರದ ಜೊತೆಗೆ ಮತ್ತೆರೆಡು ಸಾವಿರ ರುಪಾಯಿ ಸೇರಿಸಿ ಕೊಡುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದರು. ಅದೇ ರೀತಿ ಎಲ್ಲ ಗ್ಯಾರಂಟಿ ಯೋಜನೆಗಳ ಬಗ್ಗೆಯು ಮಾತನಾಡಿದ್ದರು, ಒಟ್ಟಿನಲ್ಲಿ ನಿರುದ್ಯೋಗ ‌ಯುವಕ ಯುವತಿಯರಿಗೆ ಈ ಯೋಜನೆಯ ಸದುಪಯೋಗ ಹೆಚ್ಚು ಆಗುತ್ತಿದೆ.

advertisement

Leave A Reply

Your email address will not be published.